ಮೊದಲಿನಿಂದಲೂ ಪತ್ನಿಗೆ ಮಕ್ಕಳಾಗಲಿಲ್ಲ ಎಂದು ಈತ ಹೊಡೆಯುತ್ತಿದ್ದ. 2016ರ ಜನವರಿ 1ರಂದು ರಾತ್ರಿ ಮಲಗುವಾಗ ವಿಷದ ಪುಡಿ ಬೆರೆಸಿ ನೀರು ಕುಡಿಸಿದ. ಮಲಗಿದ ನಂತರ ಪತ್ನಿಯ ತಲೆಯ ಅರ್ಧದಷ್ಟು ಭಾಗ ಕತ್ತರಿಸಿ ಶವವನ್ನು ಮನೆಯ ಹಿಂಭಾಗದ ಉಣ್ಣೆಗುತ್ತಿಯಲ್ಲಿ ಇರಿಸಿದ್ದ. ಈತನನ್ನು ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಜಿ.ಕುರುವಟ್ಟಿ ಅವರು ಶಿಕ್ಷಿ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಪ್ಪ ಸಿ.ನಾಕ್ಮನ್ ವಾದ ಮಂಡಿಸಿದ್ದರು.