ನಾಗರಹೊಳೆ ಉದ್ಯಾನದಂಚಿನ ಹಂದಿಹಳ್ಳದ ಬಳಿ ಭಾನುವಾರ ನೇರಳಕುಪ್ಪೆ ಗ್ರಾಮದ ಶಿವರಾಜು ಕುರಿಗಳನ್ನು ಮೇಯಿಸುತ್ತಿದ್ದರು. ಆ ವೇಳೆ ಹುಲಿಯು ಕುರಿ ಮಂದೆಯ ಮೇಲೆರಗಿ ಒಂದು ಕುರಿಯನ್ನು ಕೊಂದು ಹಾಕಿದೆ. ಹುಲಿ ಕಂಡ ಕುರಿಗಾಹಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಕುರಿಯನ್ನು ಅಲ್ಲೇ ಬಿಟ್ಟು ಹುಲಿ ಪರಾರಿಯಾಗಿದೆ. ಡಿ.ಆರ್.ಎಫ್.ಒ ವೀರಭದ್ರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.