ಕೊಳಲು ವಾದನ ಹಾಗೂ ಗಾಯನದ ನಾಡಿನ ಅನನ್ಯ ಪ್ರತಿಭೆ ವಾರಿಜಾಶ್ರೀ ಅವರು ಆಯ್ಕೆ ಮಾಡಿಕೊಂಡಿದ್ದ ಕೃತಿಗಳು ಸಂಗೀತ ಪ್ರಿಯರನ್ನು ಅಚ್ಚರಿಗೆ ದೂಡಿದವು. ಮುತ್ತುಸ್ವಾಮಿ ದೀಕ್ಷಿತರ್, ಮೈಸೂರು ವಾಸುದೇವಾಚಾರ್ಯ, ತಂಜಾವೂರ್ ಕೃಷ್ಣಯ್ಯ, ವಿಂಜಮುರಿ ವರದರಾಜ ಅಯ್ಯಂಗಾರ್ ಸೇರಿದಂತೆ ವಾಗ್ಗೇಯಕಾರರ ಅಪರೂಪದ ಪ್ರಯೋಗಗಳನ್ನು ನೆನಪು ಮಾಡಿದವು.