ಮೈಸೂರು: ನಗರದ ಒಂಟಿಕೊಪ್ಪಲಿನಲ್ಲಿ ಝೆರಾಕ್ಸ್ ಅಂಗಡಿ ನಡೆಸುತ್ತಿದ್ದ ಯುವ ವ್ಯಾಪಾರಿಯೊಬ್ಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನೇಶ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ.
ಅಂಗಡಿ ಮಾಡಲಿಕ್ಕಾಗಿ ಈತ ಸಾಲ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ ಎಂದು ವಿ.ವಿ.ಪುರಂ ಪೊಲೀಸರು ತಿಳಿಸಿದ್ದಾರೆ.
ಸರ ಕಸಿದು ಪರಾರಿ
ಕಿಡಿಗೇಡಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದೆ.
ಖಾಸಗಿ ಕಂಪನಿಯ ನೌಕರ, ಎನ್.ಆರ್.ಮೊಹಲ್ಲಾ ನಿವಾಸಿ ಪುನೀತ್ (26) ತನ್ನ ಬೈಕ್ನಲ್ಲಿ ಮನೆಗೆ ಬರುತ್ತಿದ್ದಾಗ, ಶಿವಾಜಿ ರಸ್ತೆಯಲ್ಲಿ ನಾಲ್ವರ ಗುಂಪೊಂದು ಅಡ್ಡಗಟ್ಟಿ ಈ ಕೃತ್ಯ ನಡೆಸಿದೆ ಎಂಬ ದೂರು ದಾಖಲಾಗಿದೆ ಎಂದು ಎನ್.ಆರ್.ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ನಗರದ ರಾಜ್ಕುಮಾರ್ ರಸ್ತೆ ಮೂಲಕ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ, ರಸ್ತೆ ಪಕ್ಕದಲ್ಲಿದ್ದ ಬೃಹತ್ ಪೈಪ್ಲೈನ್ನ ವಾಲ್ವ್ ಗುಂಡಿಗೆ ಬಿದ್ದ ಕೆಎಸ್ಆರ್ಟಿಸಿಯ ನಿವೃತ್ತ ಚಾಲಕ ಎಂ.ವಿ.ದೇವರಾಜು (59) ಗಾಯಗೊಂಡಿದ್ದಾರೆ. ಬೈಕ್ ಜಖಂಗೊಂಡಿದೆ.