ಮೈಸೂರು: ‘ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಜನಸ್ನೇಹಿ ಟೋಲ್ ದರ ಸಂಗ್ರಹಿಸುವಂತೆ’ ಆಗ್ರಹಿಸಿ ಇಲ್ಲಿನ ದಶಪಥ ಪ್ರವೇಶದ ಬೆಂಗಳೂರು ರಸ್ತೆಯ ಮಣಿಪಾಲ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
' ದುಬಾರಿ ಟೋಲ್ ವಿರುದ್ಧ ಶಾಂತಿಯುತ ಪ್ರತಿಭಟನೆ' ಯಲ್ಲಿ ವಿವಿಧ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿದ್ದು, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಚಳವಳಿ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದೇವರಾಜ ಅರಸು ಪ್ರತಿಮೆ ನಿರ್ಮಾಣ ಸಮಿತಿ , ಕನ್ನಡ ವೇದಿಕೆ ಪ್ರಮುಖರು, ಇದ್ದರು.
'ಕಿ.ಮೀ.ಗೆ ₹ 1 ಸಾಕು', ಟೋಲ್ ದರ ₹1 ಕ್ಕೆ ನಿಗದಿಯಾಗಬೇಕು', 'ದುಬಾರಿ ಬೆಲೆಗೆ ಜನ ಕುಸಿದಿದ್ದಾರೆ ಟೋಲ್ ಶುಲ್ಕದ ಭಾರಕ್ಕೆ ನರಳುತ್ತಿದ್ದಾರೆ', ಎಂಬಿತ್ಯಾದಿ ಘೋಷಣೆಗಳ ಫಲಕ ಪ್ರದರ್ಶಿಸಿದರು.