<p><strong>ಮೈಸೂರು</strong>: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ, ಅನಂತೇಶ್ವರ ಟ್ರಸ್ಟ್ ಆಶ್ರಯದಲ್ಲಿ ನಗರದ ಜೆಎಲ್ಬಿ ರಸ್ತೆಯ ನಾದಬ್ರಹ್ಮಸಭಾದಲ್ಲಿ ಮಂಗಳವಾರ ‘ಮರೆಯಲಾಗದ ಮಹನೀಯರು’ ವಿಶೇಷ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಖ್ಯಾತ ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಸಾರಥ್ಯದಲ್ಲಿ, ಗಾಯಕರಾದ ದಿವ್ಯಾ ಸಚ್ಚಿದಾನಂದ, ಶ್ರೀದೇವಿ ಕುಳನೂರು, ಅಮೃತಾ ನಿತಿನ್ ಶಾಸ್ತ್ರಿ, ಋತ್ವಿಕ್ ಸಿ.ರಾಜ್, ಜಿ.ಆರ್.ಶ್ರೀಕರ ಸುಗಮ ಸಂಗೀತ ಸುಧೆ ಹರಿಸಿದರು. ಅಳುವ ಕಡಲೊಳು, ಕಾಣದ ಕಡಲಿಗೆ, ನಿತ್ಯೋತ್ಸವ ಸೇರಿದಂತೆ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿದರು. </p>.<p>ಪುರುಷೋತ್ತಮ್ (ಕೀಬೋರ್ಡ್), ಭೀಮಾಶಂಕರ್ ಬಿದನೂರು (ತಬಲಾ), ಬಾಲಸುಬ್ರಮಣ್ಯ (ಕೊಳಲು), ಎಚ್.ಪಿ. ಸುಜಯೇಂದ್ರ (ರಿದಂ ಪ್ಯಾಡ್) ವಾದ್ಯ ಸಹಕಾರ ನೀಡಿದರು. ನಿತಿನ್ ರಾಜಾರಾಂಶಾಸ್ತ್ರಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.</p>.<p>ಚಲನಚಿತ್ರ ನಟ ಶಂಕರ್ ಅಶ್ವತ್ಥ್ ಮಾತನಾಡಿ, ‘ಭಾವಗೀತೆ ಎಂದರೆ ಸಾಹಿತ್ಯ ಮತ್ತು ಸಂಗೀತದ ಮಿಲನ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ‘ಮೈಸೂರು ಸ್ವರ್ಗಕ್ಕೆ ಸಮಾನ. ಸಭಿಕರು ದೇವತೆಗಳಿದ್ದಂತೆ. ಅಷ್ಟೊಂದು ಸಾಂಸ್ಕೃತಿಕ, ಸಹೃದಯ ಮನಸ್ಸುಗಳು ಇಲ್ಲಿವೆ’ ಎಂದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿದರು.</p>.<p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ.ರಘುರಾಂ, ಅನಂತೇಶ್ವರ ಟ್ರಸ್ಟ್ನ ಉಪಾಧ್ಯಕ್ಷ ಮಹಬಲೇಶ್ವರ ಬೈರಿ, ಎನ್.ಬೆಟ್ಟೇಗೌಡ, ರಂಗನಾಥ್ ಮೈಸೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ, ಅನಂತೇಶ್ವರ ಟ್ರಸ್ಟ್ ಆಶ್ರಯದಲ್ಲಿ ನಗರದ ಜೆಎಲ್ಬಿ ರಸ್ತೆಯ ನಾದಬ್ರಹ್ಮಸಭಾದಲ್ಲಿ ಮಂಗಳವಾರ ‘ಮರೆಯಲಾಗದ ಮಹನೀಯರು’ ವಿಶೇಷ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಖ್ಯಾತ ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಸಾರಥ್ಯದಲ್ಲಿ, ಗಾಯಕರಾದ ದಿವ್ಯಾ ಸಚ್ಚಿದಾನಂದ, ಶ್ರೀದೇವಿ ಕುಳನೂರು, ಅಮೃತಾ ನಿತಿನ್ ಶಾಸ್ತ್ರಿ, ಋತ್ವಿಕ್ ಸಿ.ರಾಜ್, ಜಿ.ಆರ್.ಶ್ರೀಕರ ಸುಗಮ ಸಂಗೀತ ಸುಧೆ ಹರಿಸಿದರು. ಅಳುವ ಕಡಲೊಳು, ಕಾಣದ ಕಡಲಿಗೆ, ನಿತ್ಯೋತ್ಸವ ಸೇರಿದಂತೆ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿದರು. </p>.<p>ಪುರುಷೋತ್ತಮ್ (ಕೀಬೋರ್ಡ್), ಭೀಮಾಶಂಕರ್ ಬಿದನೂರು (ತಬಲಾ), ಬಾಲಸುಬ್ರಮಣ್ಯ (ಕೊಳಲು), ಎಚ್.ಪಿ. ಸುಜಯೇಂದ್ರ (ರಿದಂ ಪ್ಯಾಡ್) ವಾದ್ಯ ಸಹಕಾರ ನೀಡಿದರು. ನಿತಿನ್ ರಾಜಾರಾಂಶಾಸ್ತ್ರಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.</p>.<p>ಚಲನಚಿತ್ರ ನಟ ಶಂಕರ್ ಅಶ್ವತ್ಥ್ ಮಾತನಾಡಿ, ‘ಭಾವಗೀತೆ ಎಂದರೆ ಸಾಹಿತ್ಯ ಮತ್ತು ಸಂಗೀತದ ಮಿಲನ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ‘ಮೈಸೂರು ಸ್ವರ್ಗಕ್ಕೆ ಸಮಾನ. ಸಭಿಕರು ದೇವತೆಗಳಿದ್ದಂತೆ. ಅಷ್ಟೊಂದು ಸಾಂಸ್ಕೃತಿಕ, ಸಹೃದಯ ಮನಸ್ಸುಗಳು ಇಲ್ಲಿವೆ’ ಎಂದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿದರು.</p>.<p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ.ರಘುರಾಂ, ಅನಂತೇಶ್ವರ ಟ್ರಸ್ಟ್ನ ಉಪಾಧ್ಯಕ್ಷ ಮಹಬಲೇಶ್ವರ ಬೈರಿ, ಎನ್.ಬೆಟ್ಟೇಗೌಡ, ರಂಗನಾಥ್ ಮೈಸೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>