ಮೈಸೂರು: ನದಿಗೆ ಹಾರಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹಗಳು ಸಾಗರಕಟ್ಟೆ ಸೇತುವೆಯಿಂದ ಅರ್ಧ ಕಿ.ಮೀ ದೂರದಲ್ಲಿ ಗುರುವಾರ ಪತ್ತೆಯಾಗಿವೆ.
ವಿಜಯನಗರದ ನಿವಾಸಿ ಶಿವಕುಮಾರ್ (24) ಹಾಗೂ ಹೂಟಗಳ್ಳಿ ನಿವಾಸಿ ರಂಜಿತಾ (21) ಮೃತಪಟ್ಟವರು.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ದಡದಲ್ಲಿ ಸಿಕ್ಕ ಇಬ್ಬರ ವಾಹನಗಳ ಆಧಾರದ ಮೇಲೆ ಇಲವಾಲ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಂದು ಶೋಧ ಕಾರ್ಯ ಆರಂಭಿಸಿದ್ದರು. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.