ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಲಕ್ಷ ವೃಕ್ಷ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Published : 15 ಜೂನ್ 2024, 16:16 IST
Last Updated : 15 ಜೂನ್ 2024, 16:16 IST
ಫಾಲೋ ಮಾಡಿ
Comments
ಶೇ 19-20ಷ್ಟು ಕಾಡು ಮಾತ್ರ ಉಳಿದಿದೆ ನೆಟ್ಟ ಸಸಿ ಬೆಳೆಸಲು ಆದ್ಯತೆ ನೀಡಿ
ಹಸಿರೀಕರಣಕ್ಕೆ ಆದ್ಯತೆ ನೀಡಲು ಮನವಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೀವ್‌ ಸ್ನೇಹಬಳಗದ ಅಧ್ಯಕ್ಷ ಎಚ್.ವಿ. ರಾಜೀವ್‌ ‘ಸರ್ಕಾರವು ಮೈಸೂರಿನ ಹೊರ ವರ್ತುಲ ರಸ್ತೆ ಅಭಿವೃದ್ಧಿಯ ಜೊತೆಗೆ ನಗರದ ಹಸಿರೀಕರಣ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಠ್ಯದಲ್ಲಿ ಪರಿಸರವನ್ನು ಪ್ರಾಯೋಗಿಕ‌‌ ವಿಷಯವನ್ನಾಗಿಸಬೇಕು. ಫುಟ್ ಪಾತ್ ನಲ್ಲಿ ಪೂರ್ತಿ ಪೇವರ್ಸ್ ಬ್ಲಾಕ್ ಹಾಕುವುದನ್ನು ನಿಲ್ಲಿಸಿ ಪ್ರತಿ ರಸ್ತೆಯಲ್ಲೂ ಕನಿಷ್ಠ ಗಿಡಗಳನ್ನು ನೆಡುವ ಕಾರ್ಯಕ್ರಮ ಜಾರಿಯಾಗಬೇಕು. ಗ್ರಾ.ಪಂ‌. ಮಟ್ಟದಲ್ಲಿ ಸಸ್ಯ ಪೋಷಕ ಪ್ರಶಸ್ತಿ ನೀಡಬೇಕು. ಮೈಸೂರು ನಗರಕ್ಕೆ ಕಬಿನಿ ನೀರು ಸರಬರಾಜನ್ನು 180 ಎಂಎಲ್‌ಡಿಗೆ ಹೆಚ್ಚಿಸಿ ಎಲ್ಲ ಪ್ರದೇಶಗಳಿಗೆ ನೀರು ಒದಗಿಸಬೇಕು. ಯುಜಿಡಿ ನೀರು ಸಂಸ್ಕರಣೆಗೆ ಎಸ್‌ಟಿಪಿ ಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಅರಣ್ಯ ಇಲಾಖೆಯಿಂದ ಸಸಿ ಆಡಿಟ್
‘ಅರಣ್ಯ ಇಲಾಖೆಯಿಂದ ನೆಟ್ಟಿರುವ ಸಸಿಗಳಿಗೆ ಜಿಯೊ ಟ್ಯಾಗ್‌ ಮಾಡಿ ಮುಂದಿನ ಮೂರು ತಿಂಗಳಲ್ಲಿ ಎಷ್ಟು ಸಸಿಗಳು ಉಳಿದಿವೆ ಎಂಬುದರ ಆಡಿಟ್‌ ನಡೆಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ‘ಇಲಾಖೆಯು ಕಳೆದ ವರ್ಷ ರಾಜ್ಯದಲ್ಲಿ 5.40 ಕೋಟಿ ಸಸಿ‌ ಹಾಗೂ ಮೈಸೂರಿ‌ನಲ್ಲಿ 20 ಲಕ್ಷ ಸಸಿ‌ ನೆಟ್ಟಿತ್ತು. ನೆಟ್ಟ ಸಸಿಗಳನ್ನು ಐದು ವರ್ಷ ಕಾಲ ಇಲಾಖೆಯೇ ನೋಡಿಕೊಳ್ಳುತ್ತಿದ್ದು ಇದನ್ನು 10 ವರ್ಷಕ್ಕೆ ಏರಿಸಲು ಚಿಂತನೆ ನಡೆದಿದೆ. ಮುಂದಿನ ಐದು ವರ್ಷದಲ್ಲಿ 20 ಕೋಟಿ ಸಸಿ ನೆಡಲಾಗುವುದು. ಇದಕ್ಕಾಗಿ ಸರ್ಕಾರವು ₹100 ಕೋಟಿ ವಿನಿಯೋಗಿಸಲಿದೆ’ ಎಂದರು. ಮೈಸೂರಿನಲ್ಲಿ ಶೇ 17 ಹಾಗೂ ಚಾಮರಾಜನಗರದಲ್ಲಿ ಶೇ 55ರಷ್ಟು ಅರಣ್ಯ ಇದೆ. ವನ್ಯಜೀವಿ ಸಂಘರ್ಷ ತಡೆಗೆ ಈಗಾಗಲೇ 332 ಕಿ.ಮೀ ಬ್ಯಾರಿಗೇಡ್ ನಿರ್ಮಿಸಲಾಗಿದ್ದು ₹150 ಕೋಟಿ ಅನುದಾನದಲ್ಲಿ 100 ಕಿ.ಮಿ. ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ವನ್ಯಜೀವಿ ಜೊತೆಗಿನ ಸಂಘರ್ಷ ತಡೆ ಸಂಬಂಧ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗುವುದು. ಜುಲೈ 3 ರಂದು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸರ ದಿನವನ್ನು ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT