ಹಸಿರೀಕರಣಕ್ಕೆ ಆದ್ಯತೆ ನೀಡಲು ಮನವಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೀವ್ ಸ್ನೇಹಬಳಗದ ಅಧ್ಯಕ್ಷ ಎಚ್.ವಿ. ರಾಜೀವ್ ‘ಸರ್ಕಾರವು ಮೈಸೂರಿನ ಹೊರ ವರ್ತುಲ ರಸ್ತೆ ಅಭಿವೃದ್ಧಿಯ ಜೊತೆಗೆ ನಗರದ ಹಸಿರೀಕರಣ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಠ್ಯದಲ್ಲಿ ಪರಿಸರವನ್ನು ಪ್ರಾಯೋಗಿಕ ವಿಷಯವನ್ನಾಗಿಸಬೇಕು. ಫುಟ್ ಪಾತ್ ನಲ್ಲಿ ಪೂರ್ತಿ ಪೇವರ್ಸ್ ಬ್ಲಾಕ್ ಹಾಕುವುದನ್ನು ನಿಲ್ಲಿಸಿ ಪ್ರತಿ ರಸ್ತೆಯಲ್ಲೂ ಕನಿಷ್ಠ ಗಿಡಗಳನ್ನು ನೆಡುವ ಕಾರ್ಯಕ್ರಮ ಜಾರಿಯಾಗಬೇಕು. ಗ್ರಾ.ಪಂ. ಮಟ್ಟದಲ್ಲಿ ಸಸ್ಯ ಪೋಷಕ ಪ್ರಶಸ್ತಿ ನೀಡಬೇಕು. ಮೈಸೂರು ನಗರಕ್ಕೆ ಕಬಿನಿ ನೀರು ಸರಬರಾಜನ್ನು 180 ಎಂಎಲ್ಡಿಗೆ ಹೆಚ್ಚಿಸಿ ಎಲ್ಲ ಪ್ರದೇಶಗಳಿಗೆ ನೀರು ಒದಗಿಸಬೇಕು. ಯುಜಿಡಿ ನೀರು ಸಂಸ್ಕರಣೆಗೆ ಎಸ್ಟಿಪಿ ಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.