ಬೆಳಿಗ್ಗೆ ತಾಯಿಯು ಬಿಸಿನೀರಿನ ಪಾತ್ರೆಯನ್ನು ಸ್ನಾನದ ಮನೆಯಲ್ಲಿರಿಸಿ, ತಣ್ಣೀರು ತರಲು ಹೊರಗಡೆ ಹೋಗಿದ್ದಾಗ ಮನೆಯ ಹಾಲ್ನಲ್ಲಿದ್ದ ಮಗು ಅಲ್ಲಿಗೆ ಹೋಗಿ ಪಾತ್ರೆಯಲ್ಲಿದ್ದ ನೀರನ್ನು ಚೆಲ್ಲಿಕೊಂಡಿತ್ತು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.