‘ವೈಯಕ್ತಿಕ ತಿಕ್ಕಾಟ, ಕೆಸರೆರಚಾಟ ಬೇಡ ಎಂದು ಸುಮ್ಮನಿದ್ದೆ. ಉಪಚುನಾವಣೆಯಲ್ಲಿ ಇದನ್ನೇ ಹೇಳಿಕೊಂಡು ಓಡಾಡ್ತೀರಿ. ಕೊಚ್ಚೆಗುಂಡಿಗೆ ಕಲ್ಲು ಎಸೆಯೋದು ಬೇಡ ಎಂದು ಸ್ನೇಹಿತರು ಹೇಳಿದರು. ಆದರೆ ಪದೇ ಪದೇ ನಿಮ್ಮ ಸುಳ್ಳು ದೂರಿನಿಂದ ನೊಂದಿರುವೆ. ನಾಲ್ಕು ದಶಕದ ರಾಜಕಾರಣದಲ್ಲಿ ನಾನು ಏನೆಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಮಂಗಳವಾರ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾ.ರಾ.ವಿರುದ್ಧ ಕಿಡಿಕಾರಿದರು.