ಪ್ರದರ್ಶನದಿಂದ ಆರಂಭಗೊಂಡ ಇವರ ಪರಿಸರ ಅರಿವಿನ ಕಾರ್ಯ, ಬಳಿಕ ಪ್ರಾಯೋಗಿಕ ಅಳವಡಿಕೆಯತ್ತ ಹೊರಳಿಕೊಂಡಿತು. ಆಡಳಿತ ತರಬೇತಿ ಸಂಸ್ಥೆ, ಚಾಮರಾಜೇಂದ್ರ ಮೃಗಾಲಯ, ಅಂಚೆ ತರಬೇತಿ ಸಂಸ್ಥೆ, ಚಾಮುಂಡಿ ಬೆಟ್ಟದ ದಾಸೋಹ ಭವನ, ಎನ್ಐಇ ಕ್ಯಾಂಟೀನ್, ವಿವಿಧ ಶಿಕ್ಷಣ ಸಂಸ್ಥೆಗಳು ಸೇರಿದಂತೆ, 100 ಮನೆಗಳಿಗೆ ಅಡುಗೆ ತ್ಯಾಜ್ಯ ಜೈವಿಕ ಅನಿಲ ಸ್ಥಾವರ ಅಳವಡಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.