ಮೈಸೂರಿನ ಗಾಂಧಿ ನಗರದ ಆದಿಜಾಂಬವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಕಟ್ಟಡದ ಒಳಗೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಎಚ್.ಕೆ. ಪಾಂಡು
ಹುಣಸೂರಿನ ರಂಗನಾಥ ಬಡಾವಣೆಯ ಸರ್ಕಾರಿ ಶಾಲೆ ಶಿಥಿಲಗೊಡಿದ್ದು ಅದನ್ನು ಬಂದ್ ಮಾಡಿ ಪರ್ಯಾಯ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ
ಎನ್ಡಿಆರ್ಎಫ್ ಅಡಿ 38 ಶಾಲೆಗಳ ಕೊಠಡಿ ದುರಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಸಿಗಲಿದೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳುತ್ತೇವೆ
ಎಚ್.ಕೆ. ಪಾಂಡು ಡಿಡಿಪಿಐ
ರೇವಣ್ಣ
ಶಿಥಿಲಗೊಂಡಿರುವ ಶಾಲೆಗಳ ಸಮಗ್ರ ಮಾಹಿತಿಯನ್ನು ಕಳೆದ ಸಾಲಿನಲ್ಲಿ ಡಿಡಿಪಿಐ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದು ಅನುದಾನಕ್ಕೆ ಮನವಿ ಮಾಡಿದ್ದೇವೆ
–ರೇವಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಹುಣಸೂರು
ನಮ್ಮ ಶಾಲೆ ಕಟ್ಟಡ ಶಿಥಿಲವಾಗಿದ್ದು ನೆಲಸಮಗೊಳಿಸುವ ಕೆಲಸ ನಡೆದಿದೆ. ಈ ಹಿಂದೆ ನೆಲಸಮಗೊಳಿಸಿದ್ದ ಕಟ್ಟಡದ ಕಾಮಗಾರಿ ಆರಂಭವಾಗದ ಕಾರಣ ಮಕ್ಕಳ ಪಾಠಕ್ಕೆ ಅಡ್ಡಿಯಾಗಿದೆ
ಗೋವಿಂದರಾಜು ಎಸ್ಡಿಎಂಸಿ ಅಧ್ಯಕ್ಷ ಕಲ್ಕುಣಿಕೆ ಸರ್ಕಾರಿ ಪ್ರಾಥಮಿಕ ಶಾಲೆ
ಎಷ್ಟು ಅನುದಾನ ಬೇಕು?
ಶಾಲೆ ಕೊಠಡಿಗಳ ತುರ್ತು ದುರಸ್ತಿಗೆ ₹53 ಕೋಟಿ ಹಾಗೂ 302 ಹೊಸ ಕೊಠಡಿಗಳ ನಿರ್ಮಾಣಕ್ಕೆ ₹43 ಕೋಟಿ ಅನುದಾನವನ್ನು ಶಿಕ್ಷಣ ಇಲಾಖೆಯು ಕೇಳಿತ್ತು. ಇದರಲ್ಲಿ ಸುಮಾರು 200 ಶಾಲೆಗಳ ಕೊಠಡಿಗಳ ದುರಸ್ತಿಗೆ ಅನುದಾನ ಬಂದಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಎನ್ಡಿಆರ್ಎಫ್ ನರೇಗಾ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಅನುದಾನಗಳು ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿ ಮಾಡುವ ಪ್ರಯತ್ನ ನಡೆದಿದೆ.