ಕುಕ್ಕರಹಳ್ಳಿ ಕೆರೆ ಸಮೀಪ ರಸ್ತೆಗುರುಳಿದ ಭಾರಿ ಗಾತ್ರದ ಮರದಿಂದ ಮೈಸೂರು-ಬೋಗಾದಿ ರಸ್ತೆಯಲ್ಲಿ ಸಂಚಾರ ಕಡಿತಗೊಂಡಿದೆ. ಮರ ತೆರವುಗೊಳಿಸುತ್ತಿದ್ದ ಪಾಲಿಕೆಯ ರಕ್ಷಣಾ ತಂಡ ಅಭಯ್ 3ನೇ ತಂಡದ ಯಂತ್ರೋಪಕರಣಗಳು ಮಳೆಯಿಂದ ಕೆಟ್ಟಿವೆ.
ವಿದ್ಯಾರಣ್ಯಪುರಂನಲ್ಲಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯಲ್ಲೂ ದೊಡ್ಡ ಗಾತ್ರದ ಮರ ಧರೆಗುರುಳಿದೆ.