ಹೆಸರು ಬಹಿರಂಗಪಡಿಸಲು ಬಯಸದ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ‘8ರಿಂದ 10 ಮಂದಿ ಇರುವ ಬೇಟೆಗಾರರ ತಂಡವೊಂದು ಸಮೀಪದ ಮಾದಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಪಶು ಆಹಾರದಲ್ಲಿ ಸಿಡಿಮದ್ದನ್ನು ಅಡಗಿಸಿಟ್ಟು, ಕಾಡಂದಿಯನ್ನು ಬೇಟೆಯಾಡುತ್ತಾರೆ. ಇದರ ಮಾಂಸವನ್ನು ಮೈಸೂರಿಗೆ ರವಾನೆ ಮಾಡಲಾಗುತ್ತಿದೆ. ಈ ತಂಡ ಅಡಗಿಸಿಟ್ಟ ಸಿಡಿಮದ್ದಿಗೆ ಈ ಹಿಂದೆಯೇ ಹಸುವೊಂದು ಬಲಿಯಾಗಿತ್ತು. ಇನ್ನಾದರೂ, ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.