ಮೈಸೂರು: ಇಲ್ಲಿನ ಬೋಗಾದಿಯಲ್ಲಿ ವಾಸವಿರುವ ಭವಾನಿ ರೇವಣ್ಣ ಅವರ ಸೋದರ ಸಂಬಂಧಿ ಡಾ.ಮಂಜುನಾಥ್ ಅವರ ನಿವಾಸದ ಮೇಲೂ ಗುರುವಾರ ಸಂಜೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಂಜೆ 6 ಗಂಟೆ ಸುಮಾರಿಗೆ 10ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಳಗೊಂಡ ತಂಡ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿತ್ತು ಎಂದು ಮೂಲಗಳು ತಿಳಿಸಿವೆ.
ಜೆ.ಪಿ.ನಗರ ಹಾಗೂ ಹುಣಸೂರಿನಲ್ಲೂ ಜೆಡಿಎಸ್ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಅದಿನ್ನೂ ಖಚಿತವಾಗಿಲ್ಲ.