‘ನಾನು ಮುಖ್ಯಮಂತ್ರಿ ಆಗಿದ್ದಾಗ ಅಲೋಕ್ ಮೋಹನ್ ಬೆಂಗಳೂರು ಕಮಿಷನರ್ ಹುದ್ದೆ ಬಯಸಿದ್ದರು. ಈತನ ಬಗ್ಗೆ ಗೊತ್ತಿದ್ದರಿಂದಲೇ ನಾನು ಅವಕಾಶ ಕೊಡಲಿಲ್ಲ. ನನ್ನ ಮೇಲಿನ ದ್ವೇಷಕ್ಕಾಗಿ ಈಗ ರಾಮನಗರ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದಾರೆ’ ಎಂದು ಆಪಾದಿಸಿದ ಅವರು, ಈ ಬಗ್ಗೆ ತನಿಖೆಯಾಗಬೇಕು ಎಂದು ಶುಕ್ರವಾರ ಇಲ್ಲಿ ಆಗ್ರಹಿಸಿದರು.