<p><strong>ತಿ.ನರಸೀಪುರ:</strong> ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದ ತ್ರಿವೇಣಿ ಸಂಗಮದ ಬಳಿಯ ಬಳ್ಳೇಶ್ವರ ಸ್ವಾಮಿ, ತಿರುಮಕೂಡಲಿನ ಶ್ರೀಅಗಸ್ತ್ಯೇಶ್ವರ, ಹಳೇ ಸಂತೆಮಾಳದ ಅನಾದಿ ಮೂಲಸ್ಥಾನೇಶ್ವರ, ಗರ್ಗೇಶ್ವರಿಯ ಗಾರ್ಗೇಶ್ವರ ಸ್ವಾಮಿ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಶಿವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ಜರುಗಿದವು.</p>.<p>ದೇವಾಲಯಗಳಲ್ಲಿ ಮುಂಜಾನೆಯ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಿಗೆ ಏಕವಾರ, ದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ರುದ್ರಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.</p>.<p>ಬಳ್ಳೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಪೂಜೆಗಳು, ಸಂಜೆ ಸಾಂಪ್ರದಾಯಿಕ ಪೂಜೆಗಳು ನಡೆದವು. ರಾತ್ರಿ 2 ಗಂಟೆಗಳಿಗೊಮ್ಮೆ ವಿವಿಧ ಅಭಿಷೇಕ, ಸೋಮವಾರ ಮುಂಜಾನೆವರೆಗೂ ನಡೆದವು.</p>.<p>ಆಲಯದಲ್ಲಿರುವ ಶನೇಶ್ವರ, ಆಂಜನೇಯ ಸ್ವಾಮಿ, ಶ್ರೀಸಾಯಿಬಾಬಾ ದೇವರಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಶಿವನ ದರ್ಶನ ಪಡೆದರು. </p>
<p><strong>ತಿ.ನರಸೀಪುರ:</strong> ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದ ತ್ರಿವೇಣಿ ಸಂಗಮದ ಬಳಿಯ ಬಳ್ಳೇಶ್ವರ ಸ್ವಾಮಿ, ತಿರುಮಕೂಡಲಿನ ಶ್ರೀಅಗಸ್ತ್ಯೇಶ್ವರ, ಹಳೇ ಸಂತೆಮಾಳದ ಅನಾದಿ ಮೂಲಸ್ಥಾನೇಶ್ವರ, ಗರ್ಗೇಶ್ವರಿಯ ಗಾರ್ಗೇಶ್ವರ ಸ್ವಾಮಿ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಶಿವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ಜರುಗಿದವು.</p>.<p>ದೇವಾಲಯಗಳಲ್ಲಿ ಮುಂಜಾನೆಯ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಿಗೆ ಏಕವಾರ, ದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ರುದ್ರಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.</p>.<p>ಬಳ್ಳೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಪೂಜೆಗಳು, ಸಂಜೆ ಸಾಂಪ್ರದಾಯಿಕ ಪೂಜೆಗಳು ನಡೆದವು. ರಾತ್ರಿ 2 ಗಂಟೆಗಳಿಗೊಮ್ಮೆ ವಿವಿಧ ಅಭಿಷೇಕ, ಸೋಮವಾರ ಮುಂಜಾನೆವರೆಗೂ ನಡೆದವು.</p>.<p>ಆಲಯದಲ್ಲಿರುವ ಶನೇಶ್ವರ, ಆಂಜನೇಯ ಸ್ವಾಮಿ, ಶ್ರೀಸಾಯಿಬಾಬಾ ದೇವರಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಶಿವನ ದರ್ಶನ ಪಡೆದರು. </p>