ಅಧ್ಯಕ್ಷರ ಪಕ್ಷ ಬದಲು: ಬಿಜೆಪಿ ನಿಲುವೂ ಬದಲು
ಕಳೆದ ಬಾರಿ ಬಿಜೆಪಿ ಸರ್ಕಾರದ ಕಡೆಯ ಅವಧಿಯಲ್ಲಿ ಯಶಸ್ವಿ ಸೋಮಶೇಖರ್ ತರುವಾಯ ಎಚ್.ವಿ. ರಾಜೀವ್ ಮುಡಾ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ ನಂತರ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ‘ಬಿಜೆಪಿ ಅವಧಿಯಲ್ಲಿನ ನಿವೇಶನಗಳ ಹಂಚಿಕೆಯನ್ನೂ ತನಿಖೆಗೆ ಒಳಪಡಿಸಿ’ ಎಂದು ಬಿಜೆಪಿಯೇ ಒತ್ತಾಯಿಸುತ್ತಿರುವುದರ ಹಿಂದೆ ರಾಜೀವ್ ಅವರನ್ನು ಹಣಿಯುವ ತಂತ್ರಗಾರಿಕೆಯೂ ಇದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ದೂರುತ್ತಾರೆ.