ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾದಲ್ಲಿ ಶಿಫಾರಸುಗಳದ್ದೇ ಕಾರುಬಾರು!

ಬದಲಿ ನಿವೇಶನ ಹಂಚಿಕೆಯಲ್ಲಿ ಅಧ್ಯಕ್ಷರ ‘ದ್ವಂದ ನಿಲುವು’: ಶಾಸಕರಿಂದಲೂ ‘ಪತ್ರ ಸಮರ’
Published : 6 ಜುಲೈ 2024, 21:30 IST
Last Updated : 6 ಜುಲೈ 2024, 21:30 IST
ಫಾಲೋ ಮಾಡಿ
Comments
ಅಧ್ಯಕ್ಷರ ಪಕ್ಷ ಬದಲು: ಬಿಜೆಪಿ ನಿಲುವೂ ಬದಲು
ಕಳೆದ ಬಾರಿ ಬಿಜೆಪಿ ಸರ್ಕಾರದ ಕಡೆಯ ಅವಧಿಯಲ್ಲಿ ಯಶಸ್ವಿ ಸೋಮಶೇಖರ್‌ ತರುವಾಯ ಎಚ್‌.ವಿ. ರಾಜೀವ್‌ ಮುಡಾ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ ನಂತರ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ‘ಬಿಜೆಪಿ ಅವಧಿಯಲ್ಲಿನ ನಿವೇಶನಗಳ ಹಂಚಿಕೆಯನ್ನೂ ತನಿಖೆಗೆ ಒಳಪಡಿಸಿ’ ಎಂದು ಬಿಜೆಪಿಯೇ ಒತ್ತಾಯಿಸುತ್ತಿರುವುದರ ಹಿಂದೆ ರಾಜೀವ್‌ ಅವರನ್ನು ಹಣಿಯುವ ತಂತ್ರಗಾರಿಕೆಯೂ ಇದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ದೂರುತ್ತಾರೆ.
‘ಮುಡಾ’ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪ್ರಮಾದ ಎದ್ದು ಕಾಣುತ್ತಿದೆ. ಡಿನೋಟಿಫೈ ನಂತರವೂ ನಿವೇಶನ ಅಭಿವೃದ್ಧಿಯನ್ನು ಅವರು ತಡೆಯಬಹುದಿತ್ತು. ಮಾಡಿದ ತಪ್ಪಿಗೆ ರಾಜೀನಾಮೆ ಕೊಡಬೇಕು.
–ಜಗದೀಶ ಶೆಟ್ಟರ್‌, ಸಂಸದ, ಬೆಳಗಾವಿ
‘₹4 ಸಾವಿರ ಕೋಟಿ ನಷ್ಟ’
‘ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದು ಕೋರಿ ರೈತ ಸಂಘಟನೆಗಳ ಒಕ್ಕೂಟವು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿದೆ. ‘2015ರ ನಂತರ ಮುಡಾದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಈವರೆಗೆ ಸುಮಾರು 6 ಸಾವಿರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಅದರಿಂದ ಸರ್ಕಾರಕ್ಕೆ ₹4 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಪ್ರಭಾವಿಗಳ ಹೆಸರು ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ ಪತ್ರಗಳ ನಡುವೆಯೂ ಅಧಿಕಾರಿಗಳು ಅಕ್ರಮ ಮುಂದುವರಿಸಿದ್ದಾರೆ. ಈ ಎಲ್ಲದರ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಕುರಬೂರು ಶಾಂತಕುಮಾರ್‌ ನೇತೃತ್ವದ ಒಕ್ಕೂಟವು ರಾಜ್ಯಪಾಲರಿಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT