ಹೇಮಂತಕುಮಾರ್ ಸಣ್ಣಪುಟ್ಟ ವಿಷಯಗಳಿಗೂ ಪತ್ನಿ ಪವಿತ್ರಾ ಜತೆ ಜಗಳವಾಡುತ್ತಿದ್ದ. 2016ರ ನವೆಂಬರ್ 21ರಂದು ಸಕಲೇಶಪುರದಲ್ಲಿ ನಡೆಯುತ್ತಿದ್ದ ಸಂಬಂಧಿಕರೊಬ್ಬರ ಮದುವೆಗಾಗಿ ಈತ ಪತ್ನಿ ಮತ್ತು ಮಕ್ಕಳ ಜತೆ ಹೋಗಿದ್ದ. ಆದರೆ, ಮದುವೆ ಮಂಟಪಕ್ಕೆ ಹೋಗದ ಈತ ಪುತ್ರಿ ರಿತನ್ಯಾಳನ್ನು ಕರೆದುಕೊಂಡು ಹೂಟಗಳ್ಳಿಯ ಕೈಗಾರಿಕಾ ಪ್ರದೇಶಕ್ಕೆ ಬಂದು, ‘ಇಬ್ಬರ ಸಾವಿಗೂ ಪತ್ನಿ ಪವಿತ್ರಾ ಅವರೇ ಕಾರಣ’ ಎಂದು ‘ಡೆತ್ನೋಟ್’ವೊಂದನ್ನು ಬರೆದು ರಿತನ್ಯಾಳ ಕೈಗೆ ಇಟ್ಟು, ಬ್ಲೇಡಿನಿಂದ ಕುತ್ತಿಗೆ ಕೋಯ್ದು ಕೊಲೆ ಮಾಡಿದ. ನಂತರ, ತನ್ನ ಎರಡೂ ಕೈಗಳನ್ನು ಬ್ಲೇಡಿನಿಂದ ಕೋಯ್ದುಕೊಂಡು ಪರಾರಿಯಾದ.