‘ಮೇ 2ರ ಬೆಳಿಗ್ಗೆ ಮೈಸೂರು ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆಗೆ ಆಮ್ಲಜನಕ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ವಿಷಯ ಗಮನಕ್ಕೆ ಬಂದಿತು. ಕೂಡಲೇ ರಾಜ್ಯದ ಕೋವಿಡ್ ನೋಡಲ್ ಅಧಿಕಾರಿಗಳಾದ ನಿಶ್ಚಿತ್ ಮತ್ತು ಗುಂಜಾಲ್ ಕೃಷ್ಣ ಅವರಿಗೆ ವಿಷಯ ತಿಳಿಸಿದೆ.ಬೆಳಿಗ್ಗೆ 11 ಗಂಟೆ ಒಳಗೆ ಆಮ್ಲಜನಕವು ಚಾಮರಾಜನಗರ ಜಿಲ್ಲೆಗೆ ತಲುಪದೇ ಇದ್ದರೆ ತುಂಬಾ ಸಂಕಷ್ಟ ಪರಿಸ್ಥಿತಿ ಎದುರಾಗಿ, ಸೋಂಕಿತರಿಗೆ ಬಹಳ ತೊಂದರೆಯಾಗುವುದರಿಂದ ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲು ಮನವಿ ಮಾಡಿದ್ದೆ.ಮೈಸೂರು ಜಿಲ್ಲಾಧಿಕಾರಿಯು, ನಿರ್ದೇಶನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ನಿಶ್ಚಿತ್ ಹೇಳಿದರು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.