ನಂತರ ಮಾತನಾಡಿದ ಅವರು ಭಾರತದಂತಹ ವೈವಿಧ್ಯಮಯ ದೇಶಕ್ಕೆ ಇಂತಹ ಸಮೂಹ ಚಟುವಟಿಕೆಗಳು ಬೇಕು. ಮನುಷ್ಯ ಮನುಷ್ಯ ನಡುವೆ ಗೋಡೆ ಕಟ್ಟುವ ವಿಚ್ಛಿದ್ರಕಾರಕ ಶಕ್ತಿಗಳ ನಡುವೆ ರಚನಾತ್ಮಕವಾಗಿ ಕಟ್ಟುವುದಕ್ಕೆ ಇಂತಹ ಯುವ ಜನೋತ್ಸವಗಳ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮುನ್ನ ಕುವೆಂಪು ಪ್ರತಿಮೆಯಿಂದ ಘಟಿಕೋತ್ಸವ ಭವನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.