<p><strong>ಮೈಸೂರು</strong>: ‘ದೇಶದ ಪ್ರಗತಿಗೆ ಯೋಚಿಸಬೇಕಾದ ರಾಜಕಾರಣಿಗಳು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಅಧಿಕಾರ ದಾಹವೇ ಅವರಿಗೆ ಮುಖ್ಯವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.</p>.<p>ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ, ‘ದೇಶದ ಸ್ಥಿತಿ ಅವಲೋಕಿಸಿದರೆ ದೇಶ ಉಳಿಸಿಕೊಳ್ಳುವ ಭರವಸೆ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ’ ಎಂದರು.</p>.<p>‘ಜಾತಿಪದ್ಧತಿಯಿಂದ ದೇಶ ವಿಭಜನೆ ಆಗುವ ಪರಿಸ್ಥಿತಿ ಇದೆ. ಸಂಕೋಲೆಗಳನ್ನು ಮೀರಿ ದೇಶಕ್ಕಾಗಿ ಒಗ್ಗೂಡದವರಿಂದ ರಾಷ್ಟ್ರಕ್ಕಾಗಿ ಏನು ತಾನೇ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅರ್ಜಿ ಹಿಡಿದು ಅಲೆಯದೇ, ಸ್ವಯಂ ಉದ್ಯೋಗ ಮಾಡುತ್ತಲೇ ಶಿಕ್ಷಣ ಪಡೆಯಬೇಕೆಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು’ ಎಂದು ಹೇಳಿದರು.</p>.<p>‘ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೇ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಹಾಳಾಗಿದೆ. ಅವರಿಗೆ ದೇಶದ ಬಗ್ಗೆ ಚಿಂತನೆ ಇಲ್ಲವಾಗಿದೆ. ಸಂಪಾದನೆ ಹಾಗೂ ವೈಯಕ್ತಿಕ ಏಳಿಗೆಯೇ ಮುಖ್ಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಇಂದಿನ ವಿದ್ಯೆಯು ಪರಿಪೂರ್ಣವಾಗಿಲ್ಲ. ವಿಜ್ಞಾನ, ಉದ್ಯೋಗ, ವಿಕಾಸವು ಶಿಕ್ಷಣದ ಧ್ಯೇಯವಾಗಬೇಕಿತ್ತು. ವಿಜ್ಞಾನದ ಮಿತಿ ಮೀರಿದ ಬೆಳವಣಿಗೆ ಅಪಾಯಕಾರಿಯಾಗಿದೆ. ಆತ್ಮಜ್ಞಾನವಿಲ್ಲದ ವಿಜ್ಞಾನದಿಂದ ಅವನತಿಯೇ ಹೆಚ್ಚು’ ಎಂದು ಎಚ್ಚರಿಸಿದರು.</p>.<p>‘ಸ್ವದೇಶದಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ವಿದೇಶದಲ್ಲಿ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾರೆ. ಸ್ವಾರ್ಥವನ್ನು ಬಿಟ್ಟು ದೇಶದ ಉನ್ನತಿಗಾಗಿ ದುಡಿಯುವಂತಾದರೆ ಭಾರತಕ್ಕೆ ಸ್ವರ್ಣಯುಗ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಹರಿಜನರ ಉದ್ಧಾರಕ್ಕೆ ಗಾಂಧಿಗೆ ಪ್ರೇರಣೆ ಏನು’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ‘ಆಫ್ರಿಕಾದಿಂದ ಬಂದ ಗಾಂಧಿ ದೇಶವನ್ನು ಅರಿಯಲು ಪರ್ಯಟನೆ ಮಾಡಿದರು. ಜಾತಿ ಪದ್ಧತಿ ನಾಶವಾಗದೇ ದೇಶದ ವಿಕಾಸ ಅಸಾಧ್ಯ ಎಂಬುದು ಅರಿವಾಯಿತು’ ಎಂದು ಉತ್ತರಿಸಿದರು.</p>.<p>‘ಗಾಂಧಿ ಹಾಗೂ ಅಂಬೇಡ್ಕರ್ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಗಾಂಧೀಜಿ ಅಸ್ಪೃಶ್ಯತೆ ಆಚರಣೆ ಮಹಾಪಾಪವೆಂದರು. ಜಾತಿ ವಿನಾಶಕ್ಕೆ ಅಂಬೇಡ್ಕರ್ ಪ್ರಯತ್ನಪಟ್ಟರೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸೇರಿದರು’ ಎಂದರು.</p>.<p>‘ಜಾಗತಿಕರಣದ ಸವಾಲು ಎದುರಿಸುವ ಸುಲಭ ಮಾರ್ಗ ಎಂದರೆ ಗಾಂಧೀಜಿಯ ತತ್ವವನ್ನು ಚೆನ್ನಾಗಿ ಅರಿಯುವುದು. ಇದಕ್ಕಿಂತ ಬೇರೆ ಯಾವುದೇ ಮಾರ್ಗದ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ದೇಶದ ಪ್ರಗತಿಗೆ ಯೋಚಿಸಬೇಕಾದ ರಾಜಕಾರಣಿಗಳು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಅಧಿಕಾರ ದಾಹವೇ ಅವರಿಗೆ ಮುಖ್ಯವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.</p>.<p>ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ, ‘ದೇಶದ ಸ್ಥಿತಿ ಅವಲೋಕಿಸಿದರೆ ದೇಶ ಉಳಿಸಿಕೊಳ್ಳುವ ಭರವಸೆ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ’ ಎಂದರು.</p>.<p>‘ಜಾತಿಪದ್ಧತಿಯಿಂದ ದೇಶ ವಿಭಜನೆ ಆಗುವ ಪರಿಸ್ಥಿತಿ ಇದೆ. ಸಂಕೋಲೆಗಳನ್ನು ಮೀರಿ ದೇಶಕ್ಕಾಗಿ ಒಗ್ಗೂಡದವರಿಂದ ರಾಷ್ಟ್ರಕ್ಕಾಗಿ ಏನು ತಾನೇ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅರ್ಜಿ ಹಿಡಿದು ಅಲೆಯದೇ, ಸ್ವಯಂ ಉದ್ಯೋಗ ಮಾಡುತ್ತಲೇ ಶಿಕ್ಷಣ ಪಡೆಯಬೇಕೆಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು’ ಎಂದು ಹೇಳಿದರು.</p>.<p>‘ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೇ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಹಾಳಾಗಿದೆ. ಅವರಿಗೆ ದೇಶದ ಬಗ್ಗೆ ಚಿಂತನೆ ಇಲ್ಲವಾಗಿದೆ. ಸಂಪಾದನೆ ಹಾಗೂ ವೈಯಕ್ತಿಕ ಏಳಿಗೆಯೇ ಮುಖ್ಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಇಂದಿನ ವಿದ್ಯೆಯು ಪರಿಪೂರ್ಣವಾಗಿಲ್ಲ. ವಿಜ್ಞಾನ, ಉದ್ಯೋಗ, ವಿಕಾಸವು ಶಿಕ್ಷಣದ ಧ್ಯೇಯವಾಗಬೇಕಿತ್ತು. ವಿಜ್ಞಾನದ ಮಿತಿ ಮೀರಿದ ಬೆಳವಣಿಗೆ ಅಪಾಯಕಾರಿಯಾಗಿದೆ. ಆತ್ಮಜ್ಞಾನವಿಲ್ಲದ ವಿಜ್ಞಾನದಿಂದ ಅವನತಿಯೇ ಹೆಚ್ಚು’ ಎಂದು ಎಚ್ಚರಿಸಿದರು.</p>.<p>‘ಸ್ವದೇಶದಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ವಿದೇಶದಲ್ಲಿ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾರೆ. ಸ್ವಾರ್ಥವನ್ನು ಬಿಟ್ಟು ದೇಶದ ಉನ್ನತಿಗಾಗಿ ದುಡಿಯುವಂತಾದರೆ ಭಾರತಕ್ಕೆ ಸ್ವರ್ಣಯುಗ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಹರಿಜನರ ಉದ್ಧಾರಕ್ಕೆ ಗಾಂಧಿಗೆ ಪ್ರೇರಣೆ ಏನು’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ‘ಆಫ್ರಿಕಾದಿಂದ ಬಂದ ಗಾಂಧಿ ದೇಶವನ್ನು ಅರಿಯಲು ಪರ್ಯಟನೆ ಮಾಡಿದರು. ಜಾತಿ ಪದ್ಧತಿ ನಾಶವಾಗದೇ ದೇಶದ ವಿಕಾಸ ಅಸಾಧ್ಯ ಎಂಬುದು ಅರಿವಾಯಿತು’ ಎಂದು ಉತ್ತರಿಸಿದರು.</p>.<p>‘ಗಾಂಧಿ ಹಾಗೂ ಅಂಬೇಡ್ಕರ್ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಗಾಂಧೀಜಿ ಅಸ್ಪೃಶ್ಯತೆ ಆಚರಣೆ ಮಹಾಪಾಪವೆಂದರು. ಜಾತಿ ವಿನಾಶಕ್ಕೆ ಅಂಬೇಡ್ಕರ್ ಪ್ರಯತ್ನಪಟ್ಟರೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸೇರಿದರು’ ಎಂದರು.</p>.<p>‘ಜಾಗತಿಕರಣದ ಸವಾಲು ಎದುರಿಸುವ ಸುಲಭ ಮಾರ್ಗ ಎಂದರೆ ಗಾಂಧೀಜಿಯ ತತ್ವವನ್ನು ಚೆನ್ನಾಗಿ ಅರಿಯುವುದು. ಇದಕ್ಕಿಂತ ಬೇರೆ ಯಾವುದೇ ಮಾರ್ಗದ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>