<p><strong>ಮೈಸೂರು</strong>: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಐಕ್ಯಾಟ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ ಲಭಿಸಿದ್ದು, ಇದರ ಅಂಗವಾಗಿ ವಿವಿಧ ದೇಶಗಳ 25 ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.</p>.<p>ಪ್ರಸ್ತುತ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ಆವರಣದಲ್ಲಿ ನಡೆಯುತ್ತಿರುವ ಈ ತರಬೇತಿಯು ವೈದ್ಯಕೀಯ ವೃತ್ತಿಪರರನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ಅತ್ಯಾಧುನಿಕ ಜೀವ ರಕ್ಷಣಾ ಚಿಕಿತ್ಸೆ ನೀಡಲು ಸಜ್ಜುಗೊಳಿಸುತ್ತದೆ. ವಿಶೇಷವಾಗಿ ಗಂಭೀರ ಸ್ಥಿತಿಯ ರೋಗಿಗಳ ತ್ವರಿತ ಹಾಗೂ ಸುರಕ್ಷಿತ ವರ್ಗಾವಣೆಗೆ ಅಗತ್ಯವಾದ ತಾಂತ್ರಿಕ ಹಾಗೂ ವೈದ್ಯಕೀಯ ಕೌಶಲಗಳನ್ನು ಇಲ್ಲಿ ಅಭ್ಯಾಸ ಮಾಡಲಾಗುತ್ತಿದೆ.</p>.<p>ಈ ತಂಡದ ಮೌಲ್ಯಮಾಪನ ಪ್ರಕ್ರಿಯೆ ಫೆ. 12ರಂದು ನಡೆಯಲಿದ್ದು, ಫೆ. 13ರಂದು ಸಂಜೆ 4.30ಕ್ಕೆ ನಗರದ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಪದವಿ ಪ್ರದಾನ ಸಮಾರಂಭ ಜರುಗಲಿದೆ.</p>.<p>‘ವಿಪತ್ತು ನಿರ್ವಹಣೆ ಹಾಗೂ ತುರ್ತು ಕ್ಷಿಪ್ರ ವರ್ಗಾವಣೆಗಳಿಗೆ ಅನುಗುಣವಾಗುವಂತೆ ಜಾಗತಿಕ ಮಟ್ಟದ ಏರೋ-ಮೆಡಿಕಲ್ ತಜ್ಞರ ಹೊಸ ಪೀಳಿಗೆಯನ್ನು ರೂಪಿಸುವುದು ಈ ತರಬೇತಿಯ ಉದ್ದೇಶವಾಗಿದೆ’ ಎಂದು ಐಕ್ಯಾಟ್ ಸಂಸ್ಥೆಯ ಸಂಸ್ಥಾಪಕಿ ಡಾ. ಶಾಲಿನಿ ನಲ್ವಾಡ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಐಕ್ಯಾಟ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ ಲಭಿಸಿದ್ದು, ಇದರ ಅಂಗವಾಗಿ ವಿವಿಧ ದೇಶಗಳ 25 ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.</p>.<p>ಪ್ರಸ್ತುತ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ಆವರಣದಲ್ಲಿ ನಡೆಯುತ್ತಿರುವ ಈ ತರಬೇತಿಯು ವೈದ್ಯಕೀಯ ವೃತ್ತಿಪರರನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ಅತ್ಯಾಧುನಿಕ ಜೀವ ರಕ್ಷಣಾ ಚಿಕಿತ್ಸೆ ನೀಡಲು ಸಜ್ಜುಗೊಳಿಸುತ್ತದೆ. ವಿಶೇಷವಾಗಿ ಗಂಭೀರ ಸ್ಥಿತಿಯ ರೋಗಿಗಳ ತ್ವರಿತ ಹಾಗೂ ಸುರಕ್ಷಿತ ವರ್ಗಾವಣೆಗೆ ಅಗತ್ಯವಾದ ತಾಂತ್ರಿಕ ಹಾಗೂ ವೈದ್ಯಕೀಯ ಕೌಶಲಗಳನ್ನು ಇಲ್ಲಿ ಅಭ್ಯಾಸ ಮಾಡಲಾಗುತ್ತಿದೆ.</p>.<p>ಈ ತಂಡದ ಮೌಲ್ಯಮಾಪನ ಪ್ರಕ್ರಿಯೆ ಫೆ. 12ರಂದು ನಡೆಯಲಿದ್ದು, ಫೆ. 13ರಂದು ಸಂಜೆ 4.30ಕ್ಕೆ ನಗರದ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಪದವಿ ಪ್ರದಾನ ಸಮಾರಂಭ ಜರುಗಲಿದೆ.</p>.<p>‘ವಿಪತ್ತು ನಿರ್ವಹಣೆ ಹಾಗೂ ತುರ್ತು ಕ್ಷಿಪ್ರ ವರ್ಗಾವಣೆಗಳಿಗೆ ಅನುಗುಣವಾಗುವಂತೆ ಜಾಗತಿಕ ಮಟ್ಟದ ಏರೋ-ಮೆಡಿಕಲ್ ತಜ್ಞರ ಹೊಸ ಪೀಳಿಗೆಯನ್ನು ರೂಪಿಸುವುದು ಈ ತರಬೇತಿಯ ಉದ್ದೇಶವಾಗಿದೆ’ ಎಂದು ಐಕ್ಯಾಟ್ ಸಂಸ್ಥೆಯ ಸಂಸ್ಥಾಪಕಿ ಡಾ. ಶಾಲಿನಿ ನಲ್ವಾಡ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>