<p><strong>ತಿ.ನರಸೀಪುರ:</strong> ಪಟ್ಟಣದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್ಐಸಿ) ಆವರಣದಲ್ಲಿ ತಾಲ್ಲೂಕು ವಿವಿಧೋದ್ದೇಶ ಕ್ರೀಡಾಂಗಣ ತಲೆ ಎತ್ತಲಿದ್ದು, ಅಲ್ಲಿ ಬೆಳೆಬಾಳುವ 552 ಮರಗಳ ಹನನಕ್ಕೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. </p>.<p>ಯುವಜನ ಹಾಗೂ ಕ್ರೀಡಾ ಸಬಲೀಕರಣ ಇಲಾಖೆಯ ಅಧಿಕಾರಿಗಳು ಈಚೆಗೆ ಕ್ರೀಡಾಂಗಣ ನಿರ್ಮಾಣ ಜಾಗದ ಪರಿಶೀಲನೆಗೆ ಬಂದಿದ್ದು, ಈ ಬಗ್ಗೆ ಕಾರ್ಖಾನೆ ಅಧಿಕಾರಿಗಳಿಗೂ ಗೊತ್ತಿಲ್ಲ. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರು, ‘ಮರಗಳ ಹನನಕ್ಕೆ ಮುಂದಾದರೆ ಪರಿಸರಕ್ಕೆ ತೀವ್ರ ಹಾನಿಯಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.</p>.<p><strong>5 ಎಕರೆ ಮಂಜೂರು</strong></p>.<p>ತಾಲ್ಲೂಕು ಕ್ರೀಡಾಂಗಣ ನಿರ್ಮಾಣವು ಹಲವು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ತಾಲ್ಲೂಕಿನ ಕ್ರೀಡಾಪ್ರಿಯರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ 5 ಎಕರೆ ಪ್ರದೇಶ ನಿಗದಿ ಮಾಡಿ, ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೇ ಸದರಿ ಜಾಗವನ್ನು ಈಗಾಗಲೇ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. </p>.<p><strong>ಯಾವ್ಯಾವ ಮರಗಳಿವೆ</strong></p>.<p>55 ತೇಗ, 24 ಗಂಧ, ತಲಾ 7 ಅರಳಿ, ಮಹಾಗನಿ, 12 ಬೇವು, 53 ತೆಂಗು, 82 ಅಡಿಕೆ, 14 ಸಿಲ್ವರ್, ತಲಾ 11 ಹುಣಸೆ, ಸೀಬೆ, ನೇರಳೆ ಸೇರಿದಂತೆ 552 ಮರಗಳಿದ್ದು, ಕ್ರೀಡಾಂಗಣಕ್ಕೆ ಇಷ್ಟು ಮರಗಳು ಉರುಳಲಿವೆ. ಈಗಾಗಲೇ ಜೆಸಿಬಿ ಯಂತ್ರಗಳು ಆವರಣಕ್ಕೆ ಬಂದಿದ್ದು, ಅದರಿಂದ ಪಟ್ಟಣಕ್ಕಿದ್ದ ಹಸಿರು ವಲಯ ನಾಶವಾಗಲಿದೆ. </p>.<p><strong>ಪರಿಸರವಾದಿಗಳ ಭೇಟಿ</strong></p>.<p>ಕಾಂಗ್ರೆಸ್ ಮುಖಂಡ ಅಹಿಂದ ಜವರಪ್ಪ, ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ, ಬಾನು ಪ್ರಶಾಂತ್, ಶೈಲಜೇಶ, ಗಂಟಯ್ಯ ಮೈಸೂರಿನಿಂದ ತಿ.ನರಸೀಪುರಕ್ಕೆ ಬುಧವಾರ ಆಗಮಿಸಿ ಪರಿಶೀಲನೆ ನಡೆಸಿದರು. </p>.<p>‘ಮರಗಳು ಸಮೃದ್ಧವಾಗಿದ್ದು, ಜೀವಸಂಕುಲದ ತಾಣವಾಗಿದೆ. ಕ್ರೀಡಾಂಗಣ ಕಟ್ಟುವುದು ಅಮಾನವೀಯ. ಅದಕ್ಕಾಗಿ ಬೇರೆಡೆಗೆ ಸ್ಥಳ ಮಂಜೂರು ಮಾಡಲಿ’ ಎಂದು ಪರಶುರಾಮೇಗೌಡ ಒತ್ತಾಯಿಸಿದರು. </p>.<p><strong>ಸಂಜಯ್ಗುಬ್ಬಿ ಬೆಂಬಲ</strong></p>.<p>ಪರಿಸರಕ್ಕಾಗಿ ನಾವು ಸಂಘಟನೆಯ ಹೋರಾಟಕ್ಕೆ ವನ್ಯಜೀವಿ ತಜ್ಞ ಸಂಜಯ್ಗುಬ್ಬಿ ಬೆಂಬಲ ವ್ಯಕ್ತಪಡಿಸಿದ್ದಾರೆ. </p>.<p>ನೂರಾರು ವರ್ಷಗಳ ಮರಗಳನ್ನು ಉರುಳಿಸುವುದೆಂದರೆ ಅದು ಯಾವ ಅಭಿವೃದ್ಧಿ? ಉದ್ದೇಶಿತ ಕ್ರೀಡಾಂಗಣ ನಿರ್ಮಾಣ ಬೇರೆಡೆಗೆ ಸ್ಥಳಾಂತರಿಸದಿದ್ದರೆ ಹೋರಾಟ ಅನಿವಾರ್ಯ</p><p>–ಪರಶುರಾಮೇಗೌಡ ಪರಿಸರಕ್ಕಾಗಿ ನಾವು ಸಂಘಟನೆ </p>.<p>70–80 ವರ್ಷಗಳಲ್ಲಿ ಬೆಳೆದಿರುವ ಪರಿಸರ ವ್ಯವಸ್ಥೆಯನ್ನು ನಾಶ ಮಾಡುವುದು ಅತ್ಯಂತ ದುರ್ಬುದ್ಧಿಯ ನಿರ್ಧಾರ. ಪರ್ಯಾಯ ಜಾಗ ಹುಡುಕಿ ಒಂದೊಂದು ಮರದ ಮೌಲ್ಯ ಅಪಾರ</p><p>–ಸಂಜಯ್ ಗುಬ್ಬಿ ವನ್ಯಜೀವಿ ತಜ್ಞ </p><p>–––</p>.<p><strong>‘ಯಾವುದೇ ತೊಂದರೆ ಇಲ್ಲ’</strong></p><p>‘ಮರಗಳನ್ನು ಹನನ ಮಾಡದೇ ಕ್ರೀಡಾಂಗಣ ನಿರ್ಮಿಸಲಾಗುವುದು. ಈ ಬಗ್ಗೆ ಆತಂಕ ಬೇಡ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ 5 ಎಕರೆ ಭೂಮಿ ಗುರುತಿಸಿ ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸರ್ವೆ ಕೂಡ ಮಾಡಲಾಗಿದೆ. ಕ್ರೀಡಾಂಗಣದಿಂದ ಕೆಎಸ್ಐಸಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ಇಲಾಖೆ ಪರಿಸರ ಸ್ನೇಹಿ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ಪಟ್ಟಣದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್ಐಸಿ) ಆವರಣದಲ್ಲಿ ತಾಲ್ಲೂಕು ವಿವಿಧೋದ್ದೇಶ ಕ್ರೀಡಾಂಗಣ ತಲೆ ಎತ್ತಲಿದ್ದು, ಅಲ್ಲಿ ಬೆಳೆಬಾಳುವ 552 ಮರಗಳ ಹನನಕ್ಕೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. </p>.<p>ಯುವಜನ ಹಾಗೂ ಕ್ರೀಡಾ ಸಬಲೀಕರಣ ಇಲಾಖೆಯ ಅಧಿಕಾರಿಗಳು ಈಚೆಗೆ ಕ್ರೀಡಾಂಗಣ ನಿರ್ಮಾಣ ಜಾಗದ ಪರಿಶೀಲನೆಗೆ ಬಂದಿದ್ದು, ಈ ಬಗ್ಗೆ ಕಾರ್ಖಾನೆ ಅಧಿಕಾರಿಗಳಿಗೂ ಗೊತ್ತಿಲ್ಲ. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರು, ‘ಮರಗಳ ಹನನಕ್ಕೆ ಮುಂದಾದರೆ ಪರಿಸರಕ್ಕೆ ತೀವ್ರ ಹಾನಿಯಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.</p>.<p><strong>5 ಎಕರೆ ಮಂಜೂರು</strong></p>.<p>ತಾಲ್ಲೂಕು ಕ್ರೀಡಾಂಗಣ ನಿರ್ಮಾಣವು ಹಲವು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ತಾಲ್ಲೂಕಿನ ಕ್ರೀಡಾಪ್ರಿಯರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ 5 ಎಕರೆ ಪ್ರದೇಶ ನಿಗದಿ ಮಾಡಿ, ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೇ ಸದರಿ ಜಾಗವನ್ನು ಈಗಾಗಲೇ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. </p>.<p><strong>ಯಾವ್ಯಾವ ಮರಗಳಿವೆ</strong></p>.<p>55 ತೇಗ, 24 ಗಂಧ, ತಲಾ 7 ಅರಳಿ, ಮಹಾಗನಿ, 12 ಬೇವು, 53 ತೆಂಗು, 82 ಅಡಿಕೆ, 14 ಸಿಲ್ವರ್, ತಲಾ 11 ಹುಣಸೆ, ಸೀಬೆ, ನೇರಳೆ ಸೇರಿದಂತೆ 552 ಮರಗಳಿದ್ದು, ಕ್ರೀಡಾಂಗಣಕ್ಕೆ ಇಷ್ಟು ಮರಗಳು ಉರುಳಲಿವೆ. ಈಗಾಗಲೇ ಜೆಸಿಬಿ ಯಂತ್ರಗಳು ಆವರಣಕ್ಕೆ ಬಂದಿದ್ದು, ಅದರಿಂದ ಪಟ್ಟಣಕ್ಕಿದ್ದ ಹಸಿರು ವಲಯ ನಾಶವಾಗಲಿದೆ. </p>.<p><strong>ಪರಿಸರವಾದಿಗಳ ಭೇಟಿ</strong></p>.<p>ಕಾಂಗ್ರೆಸ್ ಮುಖಂಡ ಅಹಿಂದ ಜವರಪ್ಪ, ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ, ಬಾನು ಪ್ರಶಾಂತ್, ಶೈಲಜೇಶ, ಗಂಟಯ್ಯ ಮೈಸೂರಿನಿಂದ ತಿ.ನರಸೀಪುರಕ್ಕೆ ಬುಧವಾರ ಆಗಮಿಸಿ ಪರಿಶೀಲನೆ ನಡೆಸಿದರು. </p>.<p>‘ಮರಗಳು ಸಮೃದ್ಧವಾಗಿದ್ದು, ಜೀವಸಂಕುಲದ ತಾಣವಾಗಿದೆ. ಕ್ರೀಡಾಂಗಣ ಕಟ್ಟುವುದು ಅಮಾನವೀಯ. ಅದಕ್ಕಾಗಿ ಬೇರೆಡೆಗೆ ಸ್ಥಳ ಮಂಜೂರು ಮಾಡಲಿ’ ಎಂದು ಪರಶುರಾಮೇಗೌಡ ಒತ್ತಾಯಿಸಿದರು. </p>.<p><strong>ಸಂಜಯ್ಗುಬ್ಬಿ ಬೆಂಬಲ</strong></p>.<p>ಪರಿಸರಕ್ಕಾಗಿ ನಾವು ಸಂಘಟನೆಯ ಹೋರಾಟಕ್ಕೆ ವನ್ಯಜೀವಿ ತಜ್ಞ ಸಂಜಯ್ಗುಬ್ಬಿ ಬೆಂಬಲ ವ್ಯಕ್ತಪಡಿಸಿದ್ದಾರೆ. </p>.<p>ನೂರಾರು ವರ್ಷಗಳ ಮರಗಳನ್ನು ಉರುಳಿಸುವುದೆಂದರೆ ಅದು ಯಾವ ಅಭಿವೃದ್ಧಿ? ಉದ್ದೇಶಿತ ಕ್ರೀಡಾಂಗಣ ನಿರ್ಮಾಣ ಬೇರೆಡೆಗೆ ಸ್ಥಳಾಂತರಿಸದಿದ್ದರೆ ಹೋರಾಟ ಅನಿವಾರ್ಯ</p><p>–ಪರಶುರಾಮೇಗೌಡ ಪರಿಸರಕ್ಕಾಗಿ ನಾವು ಸಂಘಟನೆ </p>.<p>70–80 ವರ್ಷಗಳಲ್ಲಿ ಬೆಳೆದಿರುವ ಪರಿಸರ ವ್ಯವಸ್ಥೆಯನ್ನು ನಾಶ ಮಾಡುವುದು ಅತ್ಯಂತ ದುರ್ಬುದ್ಧಿಯ ನಿರ್ಧಾರ. ಪರ್ಯಾಯ ಜಾಗ ಹುಡುಕಿ ಒಂದೊಂದು ಮರದ ಮೌಲ್ಯ ಅಪಾರ</p><p>–ಸಂಜಯ್ ಗುಬ್ಬಿ ವನ್ಯಜೀವಿ ತಜ್ಞ </p><p>–––</p>.<p><strong>‘ಯಾವುದೇ ತೊಂದರೆ ಇಲ್ಲ’</strong></p><p>‘ಮರಗಳನ್ನು ಹನನ ಮಾಡದೇ ಕ್ರೀಡಾಂಗಣ ನಿರ್ಮಿಸಲಾಗುವುದು. ಈ ಬಗ್ಗೆ ಆತಂಕ ಬೇಡ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ 5 ಎಕರೆ ಭೂಮಿ ಗುರುತಿಸಿ ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸರ್ವೆ ಕೂಡ ಮಾಡಲಾಗಿದೆ. ಕ್ರೀಡಾಂಗಣದಿಂದ ಕೆಎಸ್ಐಸಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ಇಲಾಖೆ ಪರಿಸರ ಸ್ನೇಹಿ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>