‘ಚಲನಚಿತ್ರ ನಟ ದರ್ಶನ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೋ ಮೂಲೆಯಲ್ಲಿ ಕುಳಿತು ಮೈಸೂರಿನ ಪೊಲೀಸ್ ಠಾಣೆಗಳನ್ನು ಸೆಟ್ಲ್ಮೆಂಟ್ ಠಾಣೆಗಳು ಎಂದಿದ್ದೀರಿ. ನೀವು ಯಾವುದಾದರೂ ದೂರು ಕೊಟ್ಟಿದ್ದೀರಾ? ಇಲ್ಲ ನಿಮ್ಮ ಸೆಲೆಬ್ರಿಟಿಯಿಂದ ಹೊಡೆತ ತಿಂದಿದ್ದಾರೆ ಎನ್ನುವ ವ್ಯಕ್ತಿಯಾದರೂ ಪೊಲೀಸರಿಗೆ ದೂರು ಕೊಟ್ಟಿದ್ದಾರಾ?’ ಎಂದು ಕೆಪಿಸಿಸಿ ವಕ್ತಾರ ಇಂದ್ರಜಿತ್ ಹೇಳಿಕೆ ವಿರುದ್ಧ ಕಿಡಿಕಾರಿದರು.