ಅವರಿಗೆ ಮಿದುಳು ನಿಷ್ಕ್ರಿಯವಾಗಿರುವುದನ್ನು ಮಂಗಳವಾರ ಘೋಷಿಸಲಾಯಿತು. ಪರೀಕ್ಷೆ ನಡೆಸಿದಾಗ ಅವರು ಅಂಗಾಂಗ ದಾನಕ್ಕೆ ಅರ್ಹರಾಗಿರುವುದೂ ಕಂಡುಬಂತು. ಹೀಗಾಗಿ ಕುಟುಂಬದವರ ಒಪ್ಪಿಗೆ ಪಡೆದು ಸಂಸ್ಥೆಯ ಆಸ್ಪತ್ರೆಯ ಅಧಿಕಾರಿಗಳು ಅಂಗ ದಾನ ಪ್ರಕ್ರಿಯೆ ನಡೆಸಿದರು. ಲಿವರ್ ಹಾಗೂ ಒಂದು ಕಿಡ್ನಿಯನ್ನು ಅಪೋಲೊ ಬಿಜಿಎಸ್ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಗೆ ಹಾಗೂ ಹೃದಯದ ಕವಾಟಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾನ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.