‘ಆ ಸಂದರ್ಭದಲ್ಲಿ ಇಡಿ, ಐಟಿ ಅಧಿಕಾರಿಗಳು ಎಲ್ಲಿದ್ದರು ? ಮೂರ್ನಾಲ್ಕು ತಿಂಗಳ ಅವಧಿ ಅಪಾರ ಪ್ರಮಾಣದ ಹಣ ಕೈಯಿಂದ ಕೈಗೆ ಹರಿದಾಡಿದರೂ ಯಾವೊಂದು ಕ್ರಮವನ್ನು ಏಕೆ ಜರುಗಿಸಲಿಲ್ಲ. ಈ ಬಗ್ಗೆಯೂ ತನಿಖೆ ನಡೆಯಲಿ. ಆಪರೇಷನ್ ಕಮಲಕ್ಕೆ ಹಣ ಹೂಡಿದವರಿಗೆ ಯಾವ ರೀತಿ ಪ್ರತಿಫಲ ಕೊಟ್ಟಿರಿ? ಎಂಬುದನ್ನು ಕೇಂದ್ರದ ಬಿಜೆಪಿ ನಾಯಕರು ಬಹಿರಂಗಪಡಿಸಬೇಕು. ನಿಮ್ಮದು ಯಾವ ಸಿದ್ಧಾಂತ ?’ ಎಂದು ಸಾ.ರಾ. ಕಿಡಿಕಾರಿದರು.