<p><strong>ಹುಣಸೂರು</strong>: ನೇರಳಕುಪ್ಪೆ ಪಂಚಾಯಿತಿ ನೇಗತ್ತೂರು ಗ್ರಾಮದ ಸೈಯದ್ ಪೀರ್ ಅವರ ಹೊಲದಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಹುಲಿಗಳು ಜಾನುವಾರಿನ ಮೇಲೆ ದಾಳಿ ನಡೆಸಿ ಅರಣ್ಯಕ್ಕೆ ಹಿಂದಿರುಗಿವೆ.</p>.<p>ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನೇಗತ್ತೂರು ಗ್ರಾಮದಲ್ಲಿ ಮೂರು ತಿಂಗಳ ನಂತರ ಗದ್ದೆ ಬಯಲಿನಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ ಎಂದು ಸ್ಥಳೀಯರಾದ ನೇಗತ್ತೂರು ಲೋಕೇಶ್ ತಿಳಿಸಿದ್ದಾರೆ.</p>.<p>ಸೈಯದ್ ಪೀರ್ ಅವರು ಹೊಲದಲ್ಲಿ ಉಕ್ಕೆ ಕೆಲಸ ಮಾಡುವಾಗ ಹುಲಿಗಳು ಜಾನುವಾರಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ ಎಂದು ತಿಳಿಸಿದ್ದಾರೆ.</p>.<p>‘ಹುಲಿ ದಾಳಿಗೆ ಒಳಗಾದ ಜಾನುವಾರಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯದಂಚಿನಲ್ಲಿ 4 ಕ್ಯಾಮೆರಾ ಅಳವಡಿಸಿದ್ದು, ಹುಲಿ ಚಲನವಲನ ಆಧರಿಸಿ ಸೆರೆ ಹಿಡಿಯಲು ಕ್ರಮ ವಹಿಸುತ್ತೇವೆ’ ಎಂದು ನಾಗರಹೊಳೆ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಹಮ್ಮಿಗೆ ಗ್ರಾಮದಲ್ಲಿ 10 ದಿನಗಳಿಂದ ಆನೆ ಮತ್ತು ಥರ್ಮಲ್ ಡ್ರೋನ್ ಬಳಸಿ ನಿರಂತರವಾಗಿ ಕೂಂಬಿಂಗ್ ನಡೆದಿದೆ. ಹೆಜ್ಜೆ ಪತ್ತೆ ಆಗುತ್ತಿದ್ದು, ಹುಲಿ ಕಾಣಿಸಿಕೊಂಡಿಲ್ಲ. ಕಾರ್ಯಾಚರಣೆಗೆ ಸ್ಥಳೀಯರು ಸಹಕರಿಸಿದ್ದಾರೆ’ ಎಂದು ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ನೇರಳಕುಪ್ಪೆ ಪಂಚಾಯಿತಿ ನೇಗತ್ತೂರು ಗ್ರಾಮದ ಸೈಯದ್ ಪೀರ್ ಅವರ ಹೊಲದಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಹುಲಿಗಳು ಜಾನುವಾರಿನ ಮೇಲೆ ದಾಳಿ ನಡೆಸಿ ಅರಣ್ಯಕ್ಕೆ ಹಿಂದಿರುಗಿವೆ.</p>.<p>ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನೇಗತ್ತೂರು ಗ್ರಾಮದಲ್ಲಿ ಮೂರು ತಿಂಗಳ ನಂತರ ಗದ್ದೆ ಬಯಲಿನಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ ಎಂದು ಸ್ಥಳೀಯರಾದ ನೇಗತ್ತೂರು ಲೋಕೇಶ್ ತಿಳಿಸಿದ್ದಾರೆ.</p>.<p>ಸೈಯದ್ ಪೀರ್ ಅವರು ಹೊಲದಲ್ಲಿ ಉಕ್ಕೆ ಕೆಲಸ ಮಾಡುವಾಗ ಹುಲಿಗಳು ಜಾನುವಾರಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ ಎಂದು ತಿಳಿಸಿದ್ದಾರೆ.</p>.<p>‘ಹುಲಿ ದಾಳಿಗೆ ಒಳಗಾದ ಜಾನುವಾರಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯದಂಚಿನಲ್ಲಿ 4 ಕ್ಯಾಮೆರಾ ಅಳವಡಿಸಿದ್ದು, ಹುಲಿ ಚಲನವಲನ ಆಧರಿಸಿ ಸೆರೆ ಹಿಡಿಯಲು ಕ್ರಮ ವಹಿಸುತ್ತೇವೆ’ ಎಂದು ನಾಗರಹೊಳೆ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಹಮ್ಮಿಗೆ ಗ್ರಾಮದಲ್ಲಿ 10 ದಿನಗಳಿಂದ ಆನೆ ಮತ್ತು ಥರ್ಮಲ್ ಡ್ರೋನ್ ಬಳಸಿ ನಿರಂತರವಾಗಿ ಕೂಂಬಿಂಗ್ ನಡೆದಿದೆ. ಹೆಜ್ಜೆ ಪತ್ತೆ ಆಗುತ್ತಿದ್ದು, ಹುಲಿ ಕಾಣಿಸಿಕೊಂಡಿಲ್ಲ. ಕಾರ್ಯಾಚರಣೆಗೆ ಸ್ಥಳೀಯರು ಸಹಕರಿಸಿದ್ದಾರೆ’ ಎಂದು ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>