<p>ಗುಂಡ್ಲುಪೇಟೆ: ದೇಶದ ಜನರ ಸಾಮಾಜಿಕ ಹಾಗೂ ಆರ್ಥಿಕ ಜನಗಣತಿ ಬಹಳ ಪ್ರಾಮುಖ್ಯತೆ ಹೊಂದಿದ್ದು ಸಾರ್ವಜನಿಕರು ಸಮರ್ಪಕವಾದ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಸೋಮವಾರ ಹೇಳಿದರು.<br /> <br /> ಪಟ್ಟಣದ ಗುರುಭವನದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಜನಗಣತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿಗಳು ಈ ತರಬೇತಿಯನ್ನು ಉತ್ತಮರೀತಿಯಲ್ಲಿ ಪಡೆದುಕೊಂಡು ಜನಗಣತಿ ವೇಳೆ ಸಮರ್ಪಕವಾದ ಮಾಹಿತಿ ದಾಖಲಿಸಬೇಕು ಎಂದರು.<br /> <br /> ಈ ಜನಗಣತಿಗಾಗಿ ಗ್ರಾಮೀಣ ಪ್ರದೇಶದಲ್ಲಿ 405 ಬ್ಲಾಕ್ಗಳನ್ನು ಮಾಡಲಾಗಿದೆ, ಒಂದು ಬ್ಲಾಕ್ಗೆ 10 ದಿವಸ ಗಳಂತೆ 45 ದಿವಸಗಳಲ್ಲಿ ಜನಗಣತಿ ಕಾರ್ಯವನ್ನು ಸಿಬ್ಬಂದಿಗಳು ಮುಗಿಸಲಿದ್ದಾರೆ ಎಂದರು. ಈ ತರಬೇತಿಗೆ 4 ಜನ ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಮೀಕ್ಷೆಯನ್ನು ಮಾಡಲಾಗುವುದು ಎಂದರು.<br /> <br /> ಈ ಜನಗಣತಿ ಕಾರ್ಯಕ್ಕಾಗಿ 17 ಜನ ಮೇಲ್ವಿಚಾರಕರು ಹಾಗೂ 101 ಜನ ಜನಗಣತಿ ಸಿಬ್ಬಂದಿಗಳನ್ನು ಈಗಾಗಲೇ ನೇಮಿಸಿದ್ದು ಎರಡು ದಿವಸಗಳ ತರಬೇತಿ ಮುಗಿದ ಕೂಡಲೇ ಜನಗಣತಿ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ತಿಳಿಸಿದರು. ಮಾಸ್ಟರ್ ತರಬೇತಿದಾರರಾದ ಸುಂದರಮೂರ್ತಿ, ಮಾದೇಗೌಡ, ಜನಾರ್ಧನ್, ರಮೇಶ್ ಮುಂತಾದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಂಡ್ಲುಪೇಟೆ: ದೇಶದ ಜನರ ಸಾಮಾಜಿಕ ಹಾಗೂ ಆರ್ಥಿಕ ಜನಗಣತಿ ಬಹಳ ಪ್ರಾಮುಖ್ಯತೆ ಹೊಂದಿದ್ದು ಸಾರ್ವಜನಿಕರು ಸಮರ್ಪಕವಾದ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಸೋಮವಾರ ಹೇಳಿದರು.<br /> <br /> ಪಟ್ಟಣದ ಗುರುಭವನದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಜನಗಣತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿಗಳು ಈ ತರಬೇತಿಯನ್ನು ಉತ್ತಮರೀತಿಯಲ್ಲಿ ಪಡೆದುಕೊಂಡು ಜನಗಣತಿ ವೇಳೆ ಸಮರ್ಪಕವಾದ ಮಾಹಿತಿ ದಾಖಲಿಸಬೇಕು ಎಂದರು.<br /> <br /> ಈ ಜನಗಣತಿಗಾಗಿ ಗ್ರಾಮೀಣ ಪ್ರದೇಶದಲ್ಲಿ 405 ಬ್ಲಾಕ್ಗಳನ್ನು ಮಾಡಲಾಗಿದೆ, ಒಂದು ಬ್ಲಾಕ್ಗೆ 10 ದಿವಸ ಗಳಂತೆ 45 ದಿವಸಗಳಲ್ಲಿ ಜನಗಣತಿ ಕಾರ್ಯವನ್ನು ಸಿಬ್ಬಂದಿಗಳು ಮುಗಿಸಲಿದ್ದಾರೆ ಎಂದರು. ಈ ತರಬೇತಿಗೆ 4 ಜನ ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಮೀಕ್ಷೆಯನ್ನು ಮಾಡಲಾಗುವುದು ಎಂದರು.<br /> <br /> ಈ ಜನಗಣತಿ ಕಾರ್ಯಕ್ಕಾಗಿ 17 ಜನ ಮೇಲ್ವಿಚಾರಕರು ಹಾಗೂ 101 ಜನ ಜನಗಣತಿ ಸಿಬ್ಬಂದಿಗಳನ್ನು ಈಗಾಗಲೇ ನೇಮಿಸಿದ್ದು ಎರಡು ದಿವಸಗಳ ತರಬೇತಿ ಮುಗಿದ ಕೂಡಲೇ ಜನಗಣತಿ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ತಿಳಿಸಿದರು. ಮಾಸ್ಟರ್ ತರಬೇತಿದಾರರಾದ ಸುಂದರಮೂರ್ತಿ, ಮಾದೇಗೌಡ, ಜನಾರ್ಧನ್, ರಮೇಶ್ ಮುಂತಾದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>