ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ಜಮಾಯಿಸಿದ ರಜಪೂತ ಸಮುದಾಯದ ಸದಸ್ಯರು, ಕೈಯಲ್ಲಿ ಭಾಗವಧ್ವಜ ಹಿಡಿದು ಸ್ವಾಭಿಮಾನಿ ಜಾಥಾ ಹೊರಟರು. ಗಾಂಧಿಚೌಕ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ಮೆಟ್ರೊಪೋಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಘೋಷಣೆ ಕೂಗಿದರು.