ಮೈಸೂರು: ಪ್ರೀತಿ ನಿರಾಕರಿಸಿದ ಎಂಜಿನಿ ಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾ ಚಾರ ನಡೆಸಿ, ನಗ್ನದೃಶ್ಯ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ರಾಶಿ ಚಿನ್ನಪ್ಪ (25) ಎಂಬಾತನನ್ನು ವಿಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಇಲ್ಲಿನ ಕಾಳಿದಾಸ ರಸ್ತೆಯ ಪಿ.ಜಿ.ಯೊಂದರಲ್ಲಿ ನೆಲೆಸಿದ್ದಾರೆ. ಕುವೆಂಪುನಗರದ ನಿವಾಸಿ ರಾಶಿ ಚಿನ್ನಪ್ಪ ಒಂದೂವರೆ ತಿಂಗಳ ಹಿಂದೆ ಕಪ್ಪಾ ಹೋಟೆಲ್ನಲ್ಲಿ ಯುವತಿಗೆ ಪರಿಚಿತನಾಗಿದ್ದನು. ನಿತ್ಯವೂ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದನು.
ವಿಜಯನಗರದ ವಾಟರ್ ಟ್ಯಾಂಕ್ ಬಳಿ ಇರುವ ಪರ್ಪಲ್ ಲೈಜ್ ಹೋಟೆಲ್ಗೆ ಬಂದು ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿದ್ದನು. ಮಾರ್ಚ್ 15ರಂದು ಸಂಜೆ 7ಕ್ಕೆ ಯುವತಿ ಅಲ್ಲಿಗೆ ತೆರಳಿದಾಗ ಕೃತ್ಯ ನಡೆದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಚಿನ್ನಪ್ಪನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಹೋಟೆಲ್ನಿಂದ ಹೊರಬರುವಾಗ ತಂಪು ಪಾನಿಯ ಸೇವಿಸುವಂತೆ ಒತ್ತಾಯಿಸಿದ್ದಾನೆ. ಈತನ ಮಾತಿಗೆ ಮಣಿದು ತಂಪು ಪಾನಿಯ ಕುಡಿದ ಯುವತಿಗೆ ಮಂಪರು ಕವಿದು ಪ್ರಜ್ಞೆ ತಪ್ಪಿದೆ. ಮರುದಿನ ಬೆಳಿಗ್ಗೆ ಪ್ರಜ್ಞೆ ಮರಳಿದಾಗ ಆಲೀವ್ ರೆಸಿಡೆನ್ಸಿ ಹೋಟೆಲ್ನ ಕೊಠಡಿಯೊಂದರಲ್ಲಿ ಬೆತ್ತಲೆಯಾಗಿರುವುದು ಗೊತ್ತಾಗಿ ಆಘಾತಗೊಂಡಿದ್ದರು’ ಎಂದು ಘಟನೆ ವಿವರಿಸಿದ್ದಾರೆ.
‘ಪ್ರಜ್ಞೆ ತಪ್ಪಿದ ಬಳಿಕ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ನಗ್ನದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಇದನ್ನು ಯುವತಿಗೆ ತೋರಿಸಿ ₹ 1 ಲಕ್ಷ ನೀಡುವಂತೆ ಪೀಡಿಸಿದ್ದಾನೆ. ಹಣ ನೀಡಿದೇ ಇದ್ದರೆ ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದನು’ ಎಂದು ಮಾಹಿತಿ ನೀಡಿದ್ದಾರೆ.