ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಗಾಳಿಗೆ ಉರುಳಿದ ವಿದ್ಯುತ್‌ ಕಂಬ

Last Updated 10 ಸೆಪ್ಟೆಂಬರ್ 2017, 7:11 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನಾದ್ಯಂತ ಶುಕ್ರವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹುಣಸೂರು –ಕೆ.ಆರ್‌.ನಗರ ಮುಖ್ಯರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ.

ಮಳೆ, ಗಾಳಿಗೆ ರಸ್ತೆ ಅಂಚಿನ ಮರ ನೆಲಕ್ಕುರುಳಿದ ಕಾರಣ ಖಾಸಗಿ ಹತ್ತಿ ಗಿರಣಿಗೆ ವಿದ್ಯುತ್‌ ಸರಬರಾಜು ಸಂಪರ್ಕ ಕಡಿತಗೊಂಡಿತ್ತು. ಒಟ್ಟು 8 ವಿದ್ಯುತ್‌ ಕಂಬಗಳು ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಆಕ್ಷೇಪ: ತಂಬಾಕು ಮಂಡಳಿ ನಿರ್ದೇಶಕ ಕಿರಣ್‌ ಕುಮಾರ್, ಸೆಸ್ಕ್‌ ತುರ್ತು ದುರಸ್ತಿ ಕ್ರಮ ಕೈಗೊಂಡಿದ್ದು, ಸ್ವಾಗತಾರ್ಹ ಎಂದು ಹೇಳಿದರು. ಹಳ್ಳಿಗಳ ಕಡೆ ಕೃಷಿ ಪಂಪ್‌ ಸೆಟ್‌ ಗೆ ಸಂಪರ್ಕ ಕಲ್ಪಿಸುವ ಕಂಬಗಳು ಉರುಳಿದ್ದು, ಅವುಗಳ ದುರಸ್ತಿಗೂ ಮುಂದಾಗಬೇಕು ಎಂದು ಕೋರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT