ಏನಿದು ಪ್ರಕರಣ?:
ಮಹಾಮಳೆಯಿಂದ ಜಿಲ್ಲೆಯಲ್ಲಿ ಹಾನಿಯಾಗಿದ್ದ ಗ್ರಾಮೀಣ ರಸ್ತೆಗಳು, ಕುಡಿಯುವ ನೀರು ಘಟಕಗಳ ದುರಸ್ತಿಗೆ ₹ 28 ಕೋಟಿ ಹಣವನ್ನು ಜಿಲ್ಲಾಧಿಕಾರಿ ನಿಗದಿಗೊಳಿಸಿ ಮೊದಲ ಹಂತದಲ್ಲಿ ₹ 21 ಕೋಟಿ ಬಿಡುಗಡೆಗೊಳಿಸಿದ್ದರು. ಅದನ್ನು ಹಂತ ಹಂತವಾಗಿ ಖರ್ಚು ಮಾಡಲು ನಿಯಮದಂತೆ ರಾಷ್ಟ್ರೀಯ ಬ್ಯಾಂಕ್ನಲ್ಲಿ ಖಾತೆ ತೆರೆದು ಇಡಬೇಕಿತ್ತು. ಆದರೆ, ಶ್ರೀಕಂಠಯ್ಯ 2019ರ ಮಾರ್ಚ್ 14ರಂದು ಖಾಸಗಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದು ಹಣವನ್ನು ಇಟ್ಟಿದ್ದರು. ಪ್ರಕೃತಿ ವಿಕೋಪದಡಿ ಬಿಡುಗಡೆಯಾದ ಅನುದಾನವನ್ನು ಠೇವಣಿ ಇಡದೆ ಉಳಿತಾಯ ಖಾತೆ ತೆರೆದು ಇಟ್ಟಿದ್ದು ಅನುಮಾನಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಅಥವಾ ಖಾಸಗಿ ಕ್ಷೇತ್ರದ ಬ್ಯಾಂಕ್ಗಳಲ್ಲಿ ಹೊಸ ಖಾತೆ ತೆರೆಯಲು ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಶ್ರೀಕಂಠಯ್ಯ ಅನುಮತಿ ಪಡೆಯದೇ ಖಾಸಗಿ ಬ್ಯಾಂಕ್ನಲ್ಲಿ ಹಣ ಇಟ್ಟಿದ್ದರು ಎಂಬುದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಲೆಕ್ಕಾಧಿಕಾರಿ ತನಿಖೆ ನಡೆಸಿದ್ದರು.