ಬೆಂಗಳೂರು ಮೂಲದ ಕರೀಂಖಾನ್ (73) ಕೊಲೆಯಾದ ವ್ಯಕ್ತಿ. ಈತನನ್ನು ಆಸ್ಸಾಂ ಮೂಲದವರಾದ ಹುಸೇನ್, ಜಾಕೀರ್ ಮತ್ತು ಮುತಾಬುದ್ದೀನ್ ಎಂಬ ಆರೋಪಿಗಳು ಕೊಲೆ ಮಾಡಿ ರೈಲಿನಲ್ಲಿ ಆಸ್ಸಾಂಗೆ ತೆರಳುತ್ತಿದ್ದರು. ಆರೋಪಿಗಳ ಪತ್ತೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಕೋಲ್ಕತ್ತದ ಹೌರಾ ಜಂಕ್ಷನ್ಗೆ ತೆರಳಿ ಅಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.