ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಜಮೀನುಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿಭದ್ರಾವತಿ ತಾಲ್ಲೂಕು ಕೆಂಚನಹಳ್ಳಿ ಕಾಲೊನಿಯ ಸೀತಾರಾಮ ಕುಟುಂಬದ ಸದಸ್ಯರು ಸೋಮವಾರಜಿಲ್ಲಾಧಿಕಾರಿ ಕಚೇರಿಮುಂದೆಉಪವಾಸ ಸತ್ಯಾಗ್ರಹನಡೆಸಿದರು.
ಸಂತ್ರಸ್ತರಿಗಾಗಿ ಸರ್ಕಾರ ಜಮೀನು ನೀಡಿದ್ದರೂ, ಕೂಡ ಅಧಿಕಾರಿಗಳು ಇದುವರೆಗೂ ತಮಗೆ ಮಂಜೂರು ಮಾಡಿಲ್ಲ. ಸಾಗುವಳಿ ಮಾಡಲು ಕೂಡ ಆಗುತ್ತಿಲ್ಲ ಎಂದು ದೂರಿದರು.
ಮೂಲತಃ ಹೊಸನಗರ ತಾಲ್ಲೂಕು ನಗರ ಹೋಬಳಿ ಇಂದ್ರೋಡಿಬಳಿ ನೆಲೆಸಿದ್ದ ಕುಟುಂಬ ಶರಾವತಿ ಮುಳುಗಡೆನಂತರ ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಹೋಬಳಿ ಯರೆಹಳ್ಳಿ ಬಳಿ ನೆಲೆಸಿದ್ದೇವೆ.1964ರಲ್ಲೇ 3 ಎಕರೆ ಜಮೀನು ಸಾಗುವಳಿಗೆ ಆದೇಶ ನೀಡಲಾಗಿತ್ತು.ಇದುವರೆಗೂ ಜಮೀನಿಗೆ ಪಕ್ಕಾ ಪೋಡು ಆಗಿಲ್ಲ. ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆ ತಡೆಯುತ್ತಾರೆ ಎಂದು ದೂರಿದರು.
ಕುಟುಂಬದ ಸದಸ್ಯರಾದ ಸೀತಾರಾಮು, ಲಲಿತಮ್ಮ, ಮಹೇಶ್, ಮಹದೇವಪ್ಪ ಇದ್ದರು.