ಈ ಸಂಬಂಧ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಡಿಯಲ್ಲಿ ಖರೀದಿ ನಡೆಯಲಿದೆ. ಚನ್ನಪಟ್ಟಣದ ಜಾನಪದ ಲೋಕದ ಬಳಿ, ಕನಕಪುರದ ಮೇಳೆಕೋಟೆ ಬಳಿ, ಮಾಗಡಿಯ ಗುಡೆಮಾರನಹಳ್ಳಿ ರಸ್ತೆಯಲ್ಲಿ ಹಾಗೂ ರಾಮನಗರದ ಅರ್ಚಕರಹಳ್ಳಿ ಸಮೀಪ ಇರುವ ಕೆಎಫ್ಸಿಎಸ್ಸಿ ಮಾರಾಟ ಮಳಿಗೆಗಳಲ್ಲಿ ಖರೀದಿ ನಡೆಯಲಿದೆ.