ಭಾನುವಾರ ಹೇಳಿಕೆ ನೀಡಿರುವ ಅವರು,‘ನಗರದ ದೊಡ್ಡ ಕೆರೆಯಲ್ಲಿ 100 ಎಂಎಲ್ಡಿ, ಸಣ್ಣ ಕೆರೆಯಲ್ಲಿ 30 ಎಂಎಲ್ಡಿ ಹಾಗೂ ತುರ್ವಿಹಾಳ ಬಳಿಯಿರುವ ಕೆರೆಯಲ್ಲಿ 1140 ಎಂಎಲ್ಡಿ ಸೇರಿ ಒಟ್ಟು 1270 ಎಂಎಲ್ಡಿ ನೀರು ಸಂಗ್ರಹವಿದೆ. ಇದರಲ್ಲಿ ಶೇ 20 ರಷ್ಟು ಆವಿಯಾಗಲಿದ್ದು, 1016 ಎಂಎಲ್ಡಿ ನೀರು ಲಭ್ಯವಾಗಲಿದೆ. ಆದರೆ ಕೆಲ ಕಿಡಿಗೇಡಿಗಳು ಕೆರೆಗಳಲ್ಲಿ ನೀರು ಖಾಲಿಯಾಗಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟು ಜನರಲ್ಲಿ ಆತಂಕ ಮೂಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಈ ಸುಳ್ಳು ಸುದ್ದಿಗೆ ನಗರದ ಜನತೆ ಕಿವಿಗೊಡಬಾರದು’ ಎಂದು ಹೇಳಿದ್ದಾರೆ.