ಸೋಮನಾಥ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ನೀರು ಹೊರ ಹಾಕಲು ಹರ ಸಾಹಸ ಪಟ್ಟರು. ವಾಲ್ಮೀಕಿ ನಗರ, ಧನಗಾರವಾಡಿ, ಭೋವಿ ಕಾಲೊನಿ, ಗಾಂಧಿ ನಗರ ಸೇರಿದಂತೆ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಿಂತ ನೀರನ್ನು ಹೊರ ಕಳಿಸಲು ಪುರಸಭೆ ಸಿಬ್ಬಂದಿ ಹರಸಾಹಸಪಟ್ಟರು.