ದೇವದುರ್ಗದಲ್ಲಿ 15, ಲಿಂಗಸುಗೂರಿನಲ್ಲಿ 5, ಮಾನ್ವಿಯಲ್ಲಿ 11, ಸಿಂಧನೂರಿನಲ್ಲಿ 4, ಮಸ್ಕಿಯಲ್ಲಿ 3 ಹಾಗೂ ಸಿರವಾರದಲ್ಲಿ 9 ಮಿಲಿಮೀಟರ್ ಮಳೆಯಾಗಿದೆ. ಈಗಾಗಲೇ ಅಧಿಕ ತೇವಾಂಶ ಬೆಳೆಗಳಿಗೆ ಮಾರಕವಾಗಿದೆ. ಮತ್ತೆ ಮತ್ತೆ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗುವ ಭೀತಿಯಲ್ಲಿ ರೈತರು ಮುಳುಗಿದ್ದಾರೆ.