ಕಟ್ಟಡದ ಜಮೀನು ಸವಳು-ಜವಳಾಗಿದ್ದು, ತಗ್ಗು ಪ್ರದೇಶದಲ್ಲಿ ನಿವೇಶ ಇರುವುದರಿಂದ ಮಳೆ ನೀರು ಸಂಗ್ರಹವಾಗುತ್ತದೆ. ಅಲ್ಲದೆ, ಶಾಲೆ ಸಮೀಪದಲ್ಲಿಯೇ ಹಳೆ ಬಾವಿ ಇದೆ. ಕಟ್ಟಡದ ಸೂತ್ತ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಬಿಸಿಯೂಟದ ಕೋಣೆ, ಶೌಚಾಲಯ, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಬಾಕಿ ಇರುವುದರಿಂದ ಎಸ್ಡಿಎಂಸಿ ಅಧ್ಯಕ್ಷರೂ ಸೇರಿ ಮಕ್ಕಳ ಪಾಲಕರು ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.