ಆಚರಿಸಿಕೊಂಡು ಬಂದಿರುವ ಪದ್ಧತಿಯಂತೆ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಅಮರೇಶ್ವರ ದೇವರ ಉತ್ಸವಮೂರ್ತಿ, ಕಳಸವನ್ನು ಭಾಜಾ– ಭಜಂತ್ರಿ ಸಮೇತ ಕೃಷ್ಣಾ ನದಿಗೆ ಕರೆದೊಯ್ಯುವುದು ವಾಡಿಕೆ. ಗುಂತಗೋಳ ಬಳಿ ಕೃಷ್ಣಾ ನದಿಯ ಬ್ರಹ್ಮ ರಾಕ್ಷಸಿ ಹೊಂಡದ ಬಳಿ ಅಮರೇಶ್ವರ ಉತ್ಸವ ಮೂರ್ತಿ, ಕಳಸ ಹಾಗೂ ಬಂದಿರುವ ಭಕ್ತರಿಗೆ ಅಭಿನವ ಗಜದಂಡ ಶಿವಾಚಾರ್ಯರು ತಲೆ
ಮೇಲೆ ಪಾದವಿಟ್ಟು ಪುಣ್ಯ ಸ್ನಾನ ಮಾಡಿಸುವ ಮೂಲಕ ಚಾಲನೆ ನೀಡಲಾಗುತ್ತದೆ.