ರಾಯಚೂರು: ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮುಖ್ಯ. ಇದಕ್ಕಾಗಿ ಶಾಲಾ ಆವರಣದಲ್ಲಿ ಕಾಣಿಸುವ ಪ್ರತಿಯೊಂದು ವಸ್ತುವಿನ ಮೇಲೆಯೂ ವಿಜ್ಞಾನ ಮಾಹಿತಿ ಅಳವಡಿಸುವ ಕೆಲಸ ಮಾಡಿದೆ. ಮರಗಳನ್ನು, ಶಾಲಾ ಕಟ್ಟಡವನ್ನು ಪಠ್ಯದ ಭಾಗವಾಗಿ ಬಳಸಿಕೊಂಡು ವಿಭಿನ್ನವಾಗಿ ಬೋಧಿಸುತ್ತಿರುವುದರಿಂದ ಸ್ವಲ್ಪಮಟ್ಟದಲ್ಲಿ ನಾನು ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರ ವೈ.ಎ. ಅವರು.