ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುವುದು. ಸಮಾಜದ ನಾಯಕರಾದ ಶ್ರೀರಾಮುಲು, ಬಿ.ವಿ.ನಾಯಕ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಬಸವನಗೌಡ ತುರುವಿಹಾಳ, ಕರೆಮ್ಮ ನಾಯಕ, ರಾಜೂಗೌಡ, ಶಿವನಗೌಡ ನಾಯಕ ಮತ್ತಿತರರು ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸಲು ಭರವಸೆ ನೀಡಿದರೆ ಹೋರಾಟ ಕೈ ಬಿಡಲಾಗುವುದು ಎಂದು ಹೇಳಿದರು.