ಲಿಂಗಸುಗೂರು: ದೀಪಾವಳಿ ಎಂದಾಕ್ಷಣ ಮನಸೋ ಇಚ್ಛೆ ಪಟಾಕಿಗಳನ್ನು ಸುಟ್ಟು ಸಂಭ್ರಮಿಸುವ ಹಬ್ಬ. ಆದರೆ, ಸ್ಥಳೀಯ ವಿನಯ್ ಎಂಟರ್ಪ್ರೈಸಸ್ ಸೋಲಾರ ಉಪಕರಣಗಳ ಮಾರಾಟ ಅಂಗಡಿ ಮಾಲೀಕರು ಪಟಾಕಿ ಸುಡುವ ಹಣವನ್ನು ಅಂಧ ವ್ಯಕ್ತಿಯೊಬ್ಬರಿಗೆ ದೇಣಿಗೆ ನೀಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಅಂಗಡಿ ಪೂಜೆಗೆ ಬಂದಿದ್ದ ಕೆಲವರು ಮಾಲೀಕ ಶಿವಕುಮಾರ ಮತ್ತು ಅಮರೇಶ ಗೌಡರ್ ಸಾರಥ್ಯದಲ್ಲಿ ಬದುಕಿನಲ್ಲಿ ಬೆಳಕನ್ನೆ ಕಾಣದ ಅಂಧ ವ್ಯಕ್ತಿಯೊ ಅಮರೇಶ ವಿಶ್ವಕರ್ಮ ಅವರನ್ನು ಸನ್ಮಾನಿಸಿ ಪಟಾಕಿ ಸುಡುವ ಹಣವನ್ನು ನೀಡಿ ಗೌರವಿಸಿದರು.
ಹಿರಿಯ ವೈದ್ಯ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ, ‘ದೀಪಾವಳಿ ಆಚರಿಸುವ ಎಲ್ಲರೂ ಇಂತಹ ಪದ್ಧತಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.