ಆಯೋಗದ 64 ಸದಸ್ಯರಲ್ಲಿ ಚುನಾಯಿತರ ಸಂಖ್ಯೆ ಕೇವಲ 5 ಇದ್ದು, ಆಡಳಿತ ಪಕ್ಷದ ಮಾತಿಗೆ ತಲೆಯಾಡಿಸುವ ಅಧಿಕಾರಿಗಳು ಹಾಗೂ ನಾಮನಿರ್ಮದೇಶಿತ ಸದಸ್ಯರು ಶಿಕ್ಷಣದ ವ್ಯವಸ್ಥೆ ಹಾಳಾಗುವಂತೆ ಮಾಡಲಿದ್ದಾರೆ. ಆದ್ದರಿಂದ ಇದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟಾಗಿದೆ. ಶೇ 80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕ ನಿಯಂತ್ರಿಸುವ ಹಕ್ಕು ರಾಜ್ಯ ಸರ್ಕಾರ ಹೊಂದಿದ್ದು, ಮುಂದಿನ ದಿನಗಳಲ್ಲಿ ಶೇ 40ಕ್ಕೆ ಇಳಿಯಲಿದೆ. ಶೇ 60 ರಷ್ಟು ಸೀಟುಗಳ ಶುಲ್ಕ ನಿಯಂತ್ರಣ ಖಾಸಗಿಯವರ ಪಾಲಾಗಲಿವೆ ಎಂದು ವೈದ್ಯರಾದ ಡಾ.ಮಹಾಲಿಂಗಪ್ಪ, ಡಾ.ಅನಿರುದ್ಧ್ ಕುಲಕರ್ಣಿ, ವಿ.ಜಿ.ಕುಲಕರ್ಣಿ, ಡಾ.ಎಂ.ಬಿ.ಪಾಟೀಲ, ಡಾ.ಹರ್ಷವರ್ಧನ, ಡಾ.ಸಾಯಿಬಾಬಾ ಅಸಮಾಧಾನ ವ್ಯಕ್ತಪಡಿಸಿದರು.