<p><strong>ಕವಿತಾಳ:</strong> ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ರಥ ನಿರ್ಮಾಣಕ್ಕೆ ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮದ ಭಕ್ತರು ದೇಣಿಗೆ ನೀಡಿದ ಕಟ್ಟಿಗೆಯನ್ನು ಮಂಗಳವಾರ ಇಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಮಠದ ಪೀಠಾಧಿಪತಿ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ರಥ ನಿರ್ಮಾಣಕ್ಕೆ ಅಂದಾಜು ₹45 ಲಕ್ಷ ವೆಚ್ಚ ತಗುಲುತ್ತದೆ. ಅದನ್ನು ದೇಣಿಗೆ ರೂಪದಲ್ಲಿ ನೀಡಲು ಭಕ್ತರು ನಿರ್ಧರಿಸಿದ್ದು ಅದರಂತೆ ಕಟ್ಟಿಗೆ ನೀಡಿದ್ದಾರೆʼ ಎಂದು ತಿಳಿಸಿದರು.</p>.<p>ಡೊಳ್ಳು, ಭಾಜಾ ಭಜಂತ್ರಿ, ಸೇರಿದಂತೆ ಜೋಡೆತ್ತುಗಳ ಮೆರವಣಿಗೆ ಮೂಲಕ ಕಟ್ಟಿಗೆ ತಂದ ಟ್ರ್ಯಾಕ್ಟರ್ ಅನ್ನು ಸ್ವಾಗತಿಸಲಾಯಿತು. ಕಟ್ಟಿಗೆ ನೋಡಲು ನೂರಾರು ಭಕ್ತರು ನೆರೆದಿದ್ದರು.</p>.<p>ಮುಖಂಡರಾದ ಸಿದ್ದಪ್ಪ ಧಣಿ, ಡಾ.ಬಸವರಾಜಪ್ಪ, ಶಿವರಾಜಪ್ಪ ಜೀನೂರು, ಕುಮಾರಸ್ವಾಮಿ, ಗುರುಶರ್ಮಾ, ಚನ್ನಬಸಯ್ಯಸ್ವಾಮಿ, ಮಲ್ಲಿಕಾರ್ಜುನ ಮೂಲಿಮನಿ, ಮೋಹನ ಕಾಳಗಿ, ಈರಪ್ಪ, ವಿರೂಪಾಕ್ಷಿಗೌಡ. ಬಸವರಾಜ, ಹುಚ್ಚರೆಡ್ಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ರಥ ನಿರ್ಮಾಣಕ್ಕೆ ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮದ ಭಕ್ತರು ದೇಣಿಗೆ ನೀಡಿದ ಕಟ್ಟಿಗೆಯನ್ನು ಮಂಗಳವಾರ ಇಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಮಠದ ಪೀಠಾಧಿಪತಿ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ರಥ ನಿರ್ಮಾಣಕ್ಕೆ ಅಂದಾಜು ₹45 ಲಕ್ಷ ವೆಚ್ಚ ತಗುಲುತ್ತದೆ. ಅದನ್ನು ದೇಣಿಗೆ ರೂಪದಲ್ಲಿ ನೀಡಲು ಭಕ್ತರು ನಿರ್ಧರಿಸಿದ್ದು ಅದರಂತೆ ಕಟ್ಟಿಗೆ ನೀಡಿದ್ದಾರೆʼ ಎಂದು ತಿಳಿಸಿದರು.</p>.<p>ಡೊಳ್ಳು, ಭಾಜಾ ಭಜಂತ್ರಿ, ಸೇರಿದಂತೆ ಜೋಡೆತ್ತುಗಳ ಮೆರವಣಿಗೆ ಮೂಲಕ ಕಟ್ಟಿಗೆ ತಂದ ಟ್ರ್ಯಾಕ್ಟರ್ ಅನ್ನು ಸ್ವಾಗತಿಸಲಾಯಿತು. ಕಟ್ಟಿಗೆ ನೋಡಲು ನೂರಾರು ಭಕ್ತರು ನೆರೆದಿದ್ದರು.</p>.<p>ಮುಖಂಡರಾದ ಸಿದ್ದಪ್ಪ ಧಣಿ, ಡಾ.ಬಸವರಾಜಪ್ಪ, ಶಿವರಾಜಪ್ಪ ಜೀನೂರು, ಕುಮಾರಸ್ವಾಮಿ, ಗುರುಶರ್ಮಾ, ಚನ್ನಬಸಯ್ಯಸ್ವಾಮಿ, ಮಲ್ಲಿಕಾರ್ಜುನ ಮೂಲಿಮನಿ, ಮೋಹನ ಕಾಳಗಿ, ಈರಪ್ಪ, ವಿರೂಪಾಕ್ಷಿಗೌಡ. ಬಸವರಾಜ, ಹುಚ್ಚರೆಡ್ಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>