ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಮೂರು ದಶಕ ಕಳೆದರೂ ಕಾಲುವೆಗೆ ಹರಿಯದ ನೀರು

ಗುತ್ತಿಗೆದಾರರು, ರಾಜಕಾರಣಿಗಳ ಪಾಲಿಗೆ ವರದಾನವಾದ ಯೋಜನೆ
ಬಿ.ಎ ನಂದಿಕೋಲಮಠ
Published : 1 ಜುಲೈ 2024, 5:52 IST
Last Updated : 1 ಜುಲೈ 2024, 5:52 IST
ಫಾಲೋ ಮಾಡಿ
Comments
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ 7(ಎ)ನೇ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಕೆಲವೆಡೆ ಮುಳ್ಳುಕಂಟಿ ಬೆಳೆದು ಮುಚ್ಚಿಕೊಂಡಿದೆ
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ 7(ಎ)ನೇ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಕೆಲವೆಡೆ ಮುಳ್ಳುಕಂಟಿ ಬೆಳೆದು ಮುಚ್ಚಿಕೊಂಡಿದೆ
ಆಧುನೀಕರಣದ ₹ 2424 ಕೋಟಿ ನೀರುಪಾಲು ನಿರ್ಮಾಣ ಹಂತದಲ್ಲಿಯೆ ಕಳಪೆ ಕಾಮಗಾರಿ ತನಿಖಾ ತಂಡಗಳ ನಿರಾಸಕ್ತಿ: ಹೆಚ್ಚಿದ ಭ್ರಷ್ಟಾಚಾರ 
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಮುಕ್ತಾಯ ವರೆಗಿನ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ಸಲ್ಲಿಸಿದರೂ ಭ್ರಷ್ಟರ ವಿರುದ್ಧ ಕ್ರಮಕೈಗೊಂಡಿಲ್ಲ.
ಎಚ್‍.ಬಿ. ಮುರಾರಿ ಹಿರಿಯ ಮುಖಂಡರು ಕಾಂಗ್ರೆಸ್‍ ಲಿಂಗಸುಗೂರು
ಬಲದಂಡೆ ಆಧುನೀಕರಣ ಕಾಮಗಾರಿ ಕುರಿತಂತೆ ಮುಖ್ಯಮಂತ್ರಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸದನದ ಅಂದಾಜು ವೆಚ್ಚ ಸಮಿತಿಗೆ ಲಿಖಿತ ದೂರು ನೀಡಿ ಸದನದಲ್ಲಿ ಚರ್ಚಿಸಿದರೂ ರೈತರಿಗೆ ನ್ಯಾಯ ದೊರಕಿಲ್ಲ
ಡಿ.ಎಸ್‍ ಹೂಲಗೇರಿ ಮಾಜಿ ಶಾಸಕರು ಲಿಂಗಸುಗೂರು
ಭ್ರಷ್ಟಚಾರ ಅಕ್ರಮ ಕಳಪೆ ಕಾಮಗಾರಿ ಸಂಬಂಧ ಕೃಷ್ಣಾ ಮೇಲ್ದಂಡೆ ಯೋಜನೆ ಜಾಗೃತಿ ಸಮಿತಿಗೆ ದೂರು ನೀಡಿ ನಿರಂತರ ಹೋರಾಟ ನಡೆಸಲಾಗಿದ್ದು. ಇದೀಗ ತನಿಖಾ ಸಂಸ್ಥೆಗಳೇ ಸ್ಪಂದಿಸುತ್ತಿಲ್ಲ
ಆರ್. ಮಾನಸಯ್ಯ ರಾಜ್ಯಾಧ‍್ಯಕ್ಷರು ಸಿಪಿಎಎಂಎಲ್‍ ರೆಡ್‍ ಸ್ಟಾರ್‍
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಈ ವರೆಗಿನ ದಾಖಲಾತಿ ಆಧರಿಸಿ ಎಲ್ಲ ಹಂತದಲ್ಲೂ ದೂರು ದಾಖಲಿಸಲಾಗಿದೆ. ಬ್ಲಾಸ್ಟಿಂಗ್‍ ಮರಮ್‍ ಹೆಸರಲ್ಲಿ ಕೋಟ್ಯಂತರ ಹಣ ದುರ್ಬಳಕೆ ಬಯಲಿಗೆಳೆಯಲು ದಾಖಲೆ ಇಟ್ಟುಕೊಂಡು ಹೋರಾಟ ಮುಂದುವರೆಸುವೆ
ಲಕ್ಷ್ಮಿಕಾಂತ ಪಾಟೀಲ ರಾಜ್ಯ ರೈತ ಸಂಘದ ರಾಜ್ಯ ಉಪಾಧ‍್ಯಕ್ಷ
ಟೆಂಡರ್‌ ಹಂತದಲ್ಲೇ ದೂರು
ಬಲದಂಡೆ ಮುಖ್ಯ ಕಾಲುವೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಕಾಮಗಾರಿಗೆ 2019ರಲ್ಲಿ ಟೆಂಡರ್ ಹಂತದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. 2020ರಲ್ಲಿ ಮುಖ್ಯ ಕಾಲುವೆ ಆಧುನೀಕರಣಕ್ಕೆ ₹980ಕೋಟಿ ವಿತರಣಾ ಮತ್ತು ಹೊಲಗಾಲುವೆಗೆ ₹1444ಕೋಟಿ ವೆಚ್ಚದ ಕಾಮಗಾರಿಯನ್ನು ಪ್ರತ್ಯೇಕ ಗುತ್ತಿಗೆದಾರರಿಗೆ ನೀಡಲಾಯಿತು. ಆಧುನೀಕರಣದ ಕ್ರಿಯಾ ಯೋಜನೆಯಲ್ಲಿ ಬ್ಲಾಸ್ಟಿಂಗ್‍ಗೆ ₹ 99 ಕೋಟಿ 65ಲಕ್ಷ ಕ್ಯೂಬಿಕ್‍ ಮೀಟರ್ ಮರಮ್ ಗೆ ₹ 420ಕೋಟಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ದೂರು ನೀಡಿದರು. ಇಂದಿಗೂ ತನಿಖೆಗಳು ಮುಂದುವರೆದಿದೆ. ಅಂದಿನ ಶಾಸಕ ಡಿ.ಎಸ್‍ ಹೂಲಗೇರಿ ಕೃಷ್ಣಾ ಭೀಮ ಅಚ್ಚುಕಟ್ಟು ಪ್ರದೇಶದ ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಅಮರೇಶ ಅಂಬಿಗೇರ ಸಮಾಜ ಚಿಂತಕ ಶರಣಪ್ಪ ಮೇಟಿ ಸಿಪಿಐಎಂಎಲ್‍ ರೆಡ್‍ ಸ್ಟಾರ್ ರಾಜ್ಯಾಧ್ಯಕ್ಷ ಮಾನಸಯ್ಯ ಆರ್. ಸೇರಿದಂತೆ ಇತರರು ಅಂದಾಜು ವೆಚ್ಚ ಸಮಿತಿ ಲೋಕಾಯುಕ್ತ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೇಂದ್ರದ ನೀರಾವರಿ ಸಚಿವರು ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ ಜಾಗೃತ ದಳಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT