ಮಾನ್ವಿ–ಬಲ್ಲಟಗಿ ಮಾರ್ಗದ ಅನೇಕ ಕಡೆ ರಸ್ತೆ ಹಾಳಾಗಿದೆ. ಆಲ್ದಾಳ ಸಮೀಪದ ಜಮೀನುಗಳ ಗುರುವಾರ ಸಂಪೂರ್ಣ ಜಲಾವೃತ ಗೊಂಡಿರುವುದು ಕಂಡು ಬಂದಿತು. ಚೀಕಲಪರ್ವಿ ಗ್ರಾಮದ ಹೊರವಲಯದ ಜನತಾ ಕಾಲೊನಿ ಹಳ್ಳವೂ ಮುಳುಗಡೆಯಾಗಿದೆ. ಮುಷ್ಟೂರು ತಡಕಲ್, ಬಾಗಲ ವಾಡ ಮತ್ತಿತರ ಗ್ರಾಮಗಳ ಸಮೀಪದ ಹಳ್ಳಗಳು ತುಂಬಿ ಹರಿಯುತ್ತಿದ್ದು ಸೇತುವೆಗಳು ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ. ಇದರಿಂದಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುತ್ತಿದ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುವಂತಾಗಿದೆ.