ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಬೈಕ್ಗೆ ಲಾರಿ ಡಿಕ್ಕಿಯಾಗಿ ಯುವಕ ಹಾಗೂ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಅಸ್ಕಿಹಾಳ ಗ್ರಾಮದ ಗೌರಿಶಂಕರ (26) ಹಾಗೂ ಪ್ರೀತಿ (22) ಮೃತಪಟ್ಟಿದ್ದಾರೆ. ಬೈಕ್ ಮುಂದೆ ಕುಳಿತಿದ್ದ ಹುಡುಗ ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ. ಕೋರ್ಟ್ ಮಾರ್ಗದ ಕಡೆಯಿಂದ ಬಂದ ಲಾರಿ ಹಾಗೂ ಬೈಕ್ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ನಿಂತುಕೊಂಡಿದ್ದವು.
ಲಾರಿಯಲ್ಲಿ ದಿಬ್ಬಣಕ್ಕೆ ಹೊರಟಿದ್ದಜನರಿದ್ದರು. ಹಸಿರು ದೀಪ ಬರುತ್ತಿದ್ದಂತೆ ಎರಡೂ ಏಕಕಾಲಕ್ಕೆ ಸಂಚರಿಸಿವೆ. ಲಾರಿ ಚಾಲಕ ಬೈಕ್ ಗಮನಿಸದೆ ಮುಂದೆ ಚಾಲನೆ ಮಾಡಿದ್ದರಿಂದ ಅಪಘಾತ ಉಂಟಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.