ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ–ಬೈಕ್‌ ಡಿಕ್ಕಿ: ಇಬ್ಬರು ಸಾವು, ಪವಾಡ ಸದೃಶವಾಗಿ ಬದುಕುಳಿದ ಬಾಲಕ

Last Updated 10 ಏಪ್ರಿಲ್ 2019, 14:21 IST
ಅಕ್ಷರ ಗಾತ್ರ

ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಯುವಕ ಹಾಗೂ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಅಸ್ಕಿಹಾಳ ಗ್ರಾಮದ ಗೌರಿಶಂಕರ (26) ಹಾಗೂ ಪ್ರೀತಿ (22) ಮೃತಪಟ್ಟಿದ್ದಾರೆ. ಬೈಕ್‌ ಮುಂದೆ ಕುಳಿತಿದ್ದ ಹುಡುಗ ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ. ಕೋರ್ಟ್‌ ಮಾರ್ಗದ ಕಡೆಯಿಂದ ಬಂದ ಲಾರಿ ಹಾಗೂ ಬೈಕ್‌ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್‌ ನಿಂತುಕೊಂಡಿದ್ದವು.

ಲಾರಿಯಲ್ಲಿ ದಿಬ್ಬಣಕ್ಕೆ ಹೊರಟಿದ್ದಜನರಿದ್ದರು. ಹಸಿರು ದೀಪ ಬರುತ್ತಿದ್ದಂತೆ ಎರಡೂ ಏಕಕಾಲಕ್ಕೆ ಸಂಚರಿಸಿವೆ. ಲಾರಿ ಚಾಲಕ ಬೈಕ್‌ ಗಮನಿಸದೆ ಮುಂದೆ ಚಾಲನೆ ಮಾಡಿದ್ದರಿಂದ ಅಪಘಾತ ಉಂಟಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT