ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹರ್ವಾಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಜನರನ್ನು ಸರದಿ ನಿಲ್ಲಿಸಿ ₹ 200 ಮುಖಬೆಲೆ ನೋಟು ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.
‘ಈಗ ಕೊಡುತ್ತಿರುವುದನ್ನು ತೆಗೆದುಕೊಳ್ಳಿ. ಮತದಾನದ ಮುನ್ನಾದಿನ ಏನು ತಲುಪಿಸಬೇಕೋ ಅದು ಕೂಡಾ ತಲುಪುತ್ತದೆ. ದಯವಿಟ್ಟು ಪ್ರತಾಪಗೌಡರಿಗೆ ಮತ ಕೊಡಿ’ ಎಂದು ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ.
ಕರಪತ್ರವೊಂದನ್ನು ಪ್ರದರ್ಶಿಸಿ ‘ಮತಪತ್ರದಲ್ಲಿ 1ನೇ ನಂಬರ್ ಪ್ರತಾಪಗೌಡರದ್ದು ಅವರಿಗೇ ಮತಕೊಡಿ. ನಿಮಗೆ ಏನು ಬೇಕೋ ಅದು ಅಭಿವೃದ್ಧಿ ಮಾಡುತ್ತಾರೆ’ ಎಂದು ಆನಂತರ ಹಣ ಹಂಚಿಕೆ ಮಾಡಲಾಗಿದೆ.
‘ಕಾರ್ಯಕರ್ತ ಮಾತನಾಡುವ ಭಾಷಾ ಶೈಲಿಯಿಂದ ಆತ ಬೆಂಗಳೂರು ಕಡೆಯವರು ಎಂಬುದು ಸ್ಪಷ್ಟವಾಗಿದೆ’ ಎಂದು ಸೋಷಿಯಲ್ ಮಿಡಿಯಾಗಳಲ್ಲಿ ಕಾಮೆಂಟ್ ಹಾಕಲಾಗಿದೆ.